Advertisement

ಸಾಲ ಪಡೆಯಲು ಜನಜಂಗುಳಿ

11:22 AM Nov 30, 2021 | Team Udayavani |

ಚಿಂಚೋಳಿ: ಡಿಸಿಸಿ ಬ್ಯಾಂಕ್‌ನಿಂದ ಸಹಕಾರ ಸಂಘಗಳ ಮೂಲಕ ರೈತರಿಗೆ ನೀಡಿದ ಶೂನ್ಯ ಬಡ್ಡಿ ಸಾಲ ಚೆಕ್‌ ನೀಡಿದ್ದರಿಂದ ರೈತರು ತಮ್ಮ ಸಾಲದ ಹಣವನ್ನು ಪಡೆದುಕೊಳ್ಳಲು ಡಿಸಿಸಿ ಬ್ಯಾಂಕ್‌ನಲ್ಲಿ ನೂಕು ನುಗ್ಗಲು ಕಂಡು ಬಂತು. ತಾಲೂಕಿನ ಕೆಲವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ನಿಂದ 2020-21ನೇ ಸಾಲಿನಲ್ಲಿ ಹೊಸ ರೈತರಿಗೆ ಬಡ್ಡಿ ರಹಿತ ಸಾಲ ವಿತರಣೆಯನ್ನು ಪ್ರಸಕ್ತ ಸಾಲಿನಲ್ಲಿ ನೀಡಲಾಗಿದೆ.

Advertisement

ಅನೇಕ ಗ್ರಾಮಗಳಿಂದ ಆಗಮಿಸಿದ ರೈತರು ತಮ್ಮ ಪಾಸ್‌ಬುಕ್‌ಗಳೊಂದಿಗೆ ಡಿಸಿಸಿ ಬ್ಯಾಂಕ್‌ಗೆ ಆಗಮಿಸಿದ್ದರು. ಬ್ಯಾಂಕ್‌ನಲ್ಲಿ ಸ್ಥಳದ ಅಭಾವ ಇರುವುದರಿಂದ ಜನ ಜಂಗುಳಿ ರೈತರು ತಮ್ಮ ಸಾಲದ ಹಣವನ್ನು ವಿತ್‌ಡ್ರಾ ಓಚರಗಳನ್ನು ಅಲ್ಲಲ್ಲಿ ಕುಳಿತುಕೊಂಡು ಬರೆಯುತ್ತಿದ್ದರು. ಕೆಲವರು ನೆಲದಲ್ಲಿಯೇ ಕುಳಿತುಕೊಂಡು ಬರೆದು ಕೊಡುತ್ತಿದ್ದರು. ಆದರೆ ಬ್ಯಾಂಕ್‌ನಲ್ಲಿ ಹಣದ ಲಭ್ಯತೆ ಇಲ್ಲದ ಕಾರಣ ರೈತರಿಗೆ ಟೋಕನ್‌ ಬರೆದುಕೊಡುತ್ತಿದ್ದರು. ದೂರದ ಗ್ರಾಮಗಳಿಂದ ಆಗಮಿಸಿದ ರೈತರು ನಿರಾಶೆಯಿಂದ ಮನೆಗೆ ಮರಳಿದರು.

ಬ್ಯಾಂಕ್‌ನಿಂದ ಸಾಲದ ಹಣವನ್ನು ಪಡೆದುಕೊಳ್ಳುವುದಕ್ಕಾಗಿ ಡಿಸಿಸಿ ಬ್ಯಾಂಕ್‌ಗೆ ಬೈಕ್‌, ಆಟೋ, ಜೀಪುಗಳಲ್ಲಿ ರೈತರು ಆಗಮಿಸಿದ್ದರಿಂದ ಬ್ಯಾಂಕ್‌ ದಾರಿಯಲ್ಲಿ ವಾಹನಗಳ ನಿಲುಗಡೆ ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next