Advertisement

ಸುರತ್ಕಲ್ : ಸಾಲ ಬಾಧೆಯಿಂದ 26 ರ ಯುವಕ ನೇಣಿಗೆ ಶರಣು

03:23 PM Jan 10, 2022 | Team Udayavani |

ಸುರತ್ಕಲ್ : ಸಾಲ ಬಾಧೆಯಿಂದ ಬೇಸತ್ತ 26 ರ ಯುವಕ ಕಛೇರಿಯಲ್ಲಿ ನೇಣಿಗೆ ಶರಣಾದ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿಯಲ್ಲಿ ಸೋಮವಾರ ನಡೆದಿದೆ.

Advertisement

ಕಿನ್ನಿಗೋಳಿ (ಮುಲ್ಕಿ) ಯ ಪಕ್ಷಿಕೆರೆ ಎಸ್ಓ ಲೇಔಟ್ ನ ಸುಶಾಂತ್ (26) ಕೆಲಸ ಮಾಡುತ್ತಿರುವ ಕಚೇರಿಯಲ್ಲಿ ಟವೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸುಶಾಂತ್ ಪೋಷಕರು 15 ವರ್ಷಗಳ ಹಿಂದೆ ವಿಧಿವಶರಾಗಿದ್ದು, ಸಹೋದರ ಅಶ್ವಿತ್ (31) ಅವರನ್ನು ಅಗಲಿದ್ದಾರೆ.

ಸಾಯುವ ಮುನ್ನ ಕ್ಷಮೆಯಾಚಿಸಿ, ಆರ್ಥಿಕ ಸಾಲದ ಕಾರಣದಿಂದ ಈ ನಿರ್ಧಾರ ಮಾಡಿದ್ದು, ತುಳು ಮೌಖಿಕ ಭಾಷೆ ಬಳಸಿ ಕನ್ನಡ ಭಾಷೆಯಲ್ಲಿ ಡೆತ್ ನೋಟ್ ಬರೆದಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next