Advertisement

ವಂಚನೆ ಪ್ರಕರಣ: ಬಂಧನವೇ ಅಕ್ರಮ; ವೇಣುಗೋಪಾಲ್‌ ಧೂತ್‌ ವಾದ

07:54 PM Jan 10, 2023 | Team Udayavani |

ಮುಂಬೈ: ಸಾಲ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ವಿಡಿಯೋಕಾನ್‌ ಗ್ರೂಪ್‌ ಸಂಸ್ಥಾಪಕ ವೇಣುಗೋಪಾಲ್‌ ಧೂತ್‌ ತಮ್ಮ ವಿರುದ್ಧ ದಾಖಲಾಗಿರುವ ಎಫ್ಆರ್‌ಐ ರದ್ದುಪಡಿಸುವಂತೆ ಬಾಂಬೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

Advertisement

ಜತೆಗೆ ಬಂಧನ ಕಾನೂನು ಬಾಹಿರ ಎಂದೂ ವಾದಿಸಿದ್ದಾರೆ. ಅದರ ವಿಚಾರಣೆ ನಡೆಸಿದ ನ್ಯಾ.ರೇವತಿ ಮೊಹಿತೆ ಮತ್ತು ನ್ಯಾ.ಪಿ.ಕೆ.ಚವಾಣ್‌ ನೇತೃತ್ವದ ನ್ಯಾಯಪೀಠ ಶುಕ್ರವಾರದೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದೆ.

ಮುಂದಿನ ವಿಚಾರಣೆ ಜ.13ರಂದು ನಡೆಯಲಿದೆ. ಇನ್ನೊಂದೆಡೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆದಿರುವ ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೊಚರ್‌ ಮತ್ತು ಅವರ ಪತಿ ದೀಪಕ್‌ ಕೊಚರ್‌ ಮಂಗಳವಾರ ಬಿಡುಗಡೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next