Advertisement

ಬೆಂಗ್ರೆ ಗುಂಪು ಘರ್ಷಣೆ: ಪೊಲೀಸರು ಸೇರಿ 10 ಮಂದಿಗೆ ಗಾಯ

12:58 PM Feb 22, 2018 | Team Udayavani |

ಮಂಗಳೂರು: ನಗರದ ಬೆಂಗ್ರೆಯಲ್ಲಿ ಮಂಗಳವಾರ ತಡ ರಾತ್ರಿ ನಡೆದ ಗುಂಪು ಘರ್ಷಣೆಯಲ್ಲಿ ಆರು ಮಂದಿ ಪೊಲೀಸರು ಸೇರಿದಂತೆ ಒಟ್ಟು 10 ಮಂದಿ ಗಾಯಗೊಂಡಿದ್ದು, ಘಟನೆ ವೇಳೆ ಕಲ್ಲು ತೂರಾಟವಾದ ಪರಿಣಾಮ, ಎರಡು ಪೊಲೀಸ್‌ ವಾಹನಗಳಿಗೆ, ಕೆಲವು ಮನೆ ಹಾಗೂ ಇತರ ಕಡೆ ಸ್ವಲ್ಪ ಮಟ್ಟಿಗೆ ಹಾನಿಯಾಗಿದೆ.

Advertisement

ಘಟನೆಗೆ ಸಂಬಂಧಿಸಿದಂತೆ ಕೆಲವು  ಮಂದಿ ಆರೋಪಿಗಳನ್ನು ಪೊಲೀಸರು ಗುರುತಿಸಿದ್ದು, ಕಾನೂನು ಕ್ರಮ ಜರಗಿ ಸಲು ಮುಂದಾಗಿದ್ದಾರೆ. ಈಗ ಪರಿಸ್ಥಿತಿ ಶಾಂತವಾಗಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಬಿಗಿ ಬಂದೋಬಸ್ತು ಕೈಗೊಂಡಿದ್ದಾರೆ. ಆದರೆ ಘರ್ಷಣೆಯನ್ನು ನಿಯಂತ್ರಿಸಲು ಪೊಲೀಸರು ಮಂಗಳವಾರ ರಾತ್ರಿ ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸುವ ಜತೆಗೆ ಅಶ್ರುವಾಯು ಕೂಡ ಪ್ರಯೋಗಿಸಿದ್ದರು.

ಉಡುಪಿಯ ಮಲ್ಪೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಭಾಗವಹಿಸಿದ್ದ ಮೀನುಗಾರರ ಸಮಾ ವೇಶದಲ್ಲಿ ಭಾಗವಹಿಸಿ ಹಿಂದಿ ರುಗುತ್ತಿದ್ದ ಬಿಜೆಪಿ ಕಾರ್ಯಕರ್ತರಿದ್ದ ಬಸ್‌ ಮಂಗಳವಾರ ರಾತ್ರಿ ಸುಮಾರು 10.30ರ ವೇಳೆಗೆ ತೋಟ ಬೆಂಗ್ರೆ ಬಳಿ
ತಲುಪಿದ್ದು, ಬಸ್‌ನಲ್ಲಿದ್ದ ಕಾರ್ಯ ಕರ್ತರು ಜೈಕಾರ ಕೂಗಿದಾಗ ಅದನ್ನು ತಡೆಯೊಡ್ಡಲು ಇನ್ನೊಂದು ಗುಂಪು ಯತ್ನಿಸಿದಾಗ ಘರ್ಷಣೆ ಆರಂಭ ವಾಯಿತು ಎನ್ನಲಾಗಿದೆ. 

ಈ ವೇಳೆ, ಬಸ್‌ ಮೇಲೆ ಕಲ್ಲು ತೂರಾಟವಾದಾಗ ಬಸ್‌ ಒಳಗಡೆ ಕುಳಿತಿದ್ದವರು ಮತ್ತು ಅಲ್ಲಿಗೆ ಬಂದ ಇನ್ನೊಂದು ತಂಡದವರ ಮಧ್ಯೆ ಘರ್ಷಣೆ ಸಂಭವಿಸಿದೆ. ಬಳಿಕ ಗಲಾಟೆ ಜೋರಾದಾಗ ಪೊಲೀಸರು ಬಂದು ಲಾಠಿ ಪ್ರಹಾರ ಮಾಡಿ ಎರಡೂ ಗುಂಪಿನವರನ್ನು ಚದುರಿಸಿದರು. ಈ ವೇಳೆ ಘಟನಾ ಸ್ಥಳದಲ್ಲಿ ಕಲ್ಲು ತೂರಾಟ ಕೂಡ ನಡೆದಿದೆ ಎನ್ನಲಾಗಿದೆ. 

ಈ ಘಟನೆ ಬಗ್ಗೆ ನಗರ ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಪ್ರತಿ ಕ್ರಿಯಿಸಿ “ಬಿಜೆಪಿ ಕಾರ್ಯಕರ್ತರಿದ್ದ ವಾಹನಕ್ಕೆ ನಾವು ತಡೆಯೊಡ್ಡಿಲ್ಲ ಎಂದು ಒಂದು ಗುಂಪು ಹೇಳಿಕೊಂಡಿದ್ದರೆ, ಅವರೇ ತಮ್ಮ ವಾಹನಕ್ಕೆ ತಡೆಯೊ ಡ್ಡಿದ್ದು ಎಂಬುದಾಗಿ ಇನ್ನೊಂದು ಗುಂಪು ಹೇಳುತ್ತಿದೆ. ಇದರಿಂದ ಎರಡೂ ಗುಂಪಿನವರ ಮಧ್ಯೆ ವೈಮನಸ್ಸು ಬೆಳೆದಿದೆ. ಅಧಿಕ ಸಂಖ್ಯೆಯಲ್ಲಿ ಜನರು ಸೇರಿದಾಗ ಮಾಹಿತಿ ಪಡೆದು ಪೊಲೀಸರು ಅಲ್ಲಿಗೆ ತೆರಳಿ ಜನರನ್ನು ಚದುರಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ. 

Advertisement

ಈ ಘಟನೆಯಲ್ಲಿ ಎರಡೂ ಗುಂಪುಗಳ ಒಟ್ಟು ನಾಲ್ವರು ಗಾಯಗೊಂಡಿ ದ್ದಾರೆ. ಕೆಲವು ಮಂದಿ ಪೊಲೀಸರಿಗೂ ಸಣ್ಣ-ಪುಟ್ಟ ಗಾಯಗಳಾಗಿವೆ. ರಾತ್ರಿ ಕತ್ತಲು ಇದ್ದ ಕಾರಣ ಕೃತ್ಯ ಎಸಗಿದವರ ಗುರುತು ಪತ್ತೆ ತತ್‌ಕ್ಷಣಕ್ಕೆ ಸಾಧ್ಯ ವಾಗಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ. 

10 ಮಂದಿಗೆ ಗಾಯ 
ಈ ಘಟನೆಯಲ್ಲಿ ಆರು ಮಂದಿ ಪೊಲೀಸರ ಸಹಿತ ಒಟ್ಟು 10 ಮಂದಿ ಗಾಯಗೊಂಡಿದ್ದಾರೆ. ಇತ್ತಂಡಗಳ ರಾಹುಲ್‌, ಲೋಕೇಶ್‌, ವಿಪಿನ್‌ ಮತ್ತು ಆಮಿರ್‌ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಲ್ಲು ಮತ್ತು ಸೋಡಾ ಬಾಟ್ಲಿ  ಎಸೆತದಿಂದಾಗಿ ಪೊಲೀಸ್‌ ವಾಹನಗಳಲ್ಲಿದ್ದ ಪಣಂಬೂರು ಎಸಿಪಿ, ರಾಜೇಂದ್ರ ಡಿ.ಎಸ್‌., ಪೊಲೀಸ್‌ ಇನ್ಸ್‌ಪೆಕ್ಟರ್‌ ರಫೀಕ್‌, ಸಬ್‌ ಇನ್ಸ್‌ಪೆಕ್ಟರ್‌ ಪೂವಪ್ಪ, ಎಎಸ್‌ಐ ಉಮೇಶ್‌ ಸಹಿತ ನಾಲ್ಕು ಮಂದಿ ಪೊಲೀಸ್‌ ಅಧಿಕಾರಿಗಳು ಮತ್ತು ಇಬ್ಬರು ಸಿಬಂದಿ ಗಾಯಗೊಂಡಿದ್ದಾರೆ. ಪೊಲೀಸರ ಒಂದು ಸಾಗರ್‌ ವಾಹನ ಮತ್ತು ಒಂದು ಜೀಪ್‌ಗೆ ಹಾನಿಯಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

5 ಪ್ರಕರಣ ದಾಖಲು 
ಈ ಘರ್ಷಣೆಗೆ ಸಂಬಂಧಿಸಿ ಪಣಂಬೂರು ಪೊಲೀಸ್‌ ಠಾಣೆಯಲ್ಲಿ ಒಟ್ಟು 5 ಎಫ್‌ಐಆರ್‌ಗಳು ದಾಖಲಾಗಿವೆ. ಎರಡು ಗುಂಪುಗಳ ಮಧ್ಯೆ ನಡೆದ ಘರ್ಷಣೆ, ಕಲ್ಲು ತೂರಾಟ, ಪೊಲೀಸ್‌ ವಾಹನಕ್ಕೆ ಕಲ್ಲೆಸೆದು ಕರ್ತವ್ಯಕ್ಕೆ ಅಡ್ಡಿ ಇತ್ಯಾದಿ ಘಟನೆಗಳು ಇದರಲ್ಲಿ ಸೇರಿವೆ. ಈ ನಡುವೆ, ಘಟನೆ ಸಂಬಂಧ ಕೆಲವು ಮಂದಿ ಆರೋಪಿಗಳ‌ನ್ನು ಗುರುತಿಸಲಾಗಿದೆ. ಆದರೆ ಯಾರನ್ನೂ ಇಲ್ಲಿವರೆಗೆ ಬಂಧಿ
ಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ: ಖಂಡನೆ
ಮಂಗಳೂರು/ಉಡುಪಿ:
ಕಾರ್ಯಕರ್ತರ ಬಸ್ಸುನ್ನು ನಗರದ ಬೆಂಗ್ರೆಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿರುವುದನ್ನು ವಿಹಿಂಪ, ಬಜರಂಗ ದಳ ಖಂಡಿಸಿದೆ. ಜತೆಗೆ ಹಲ್ಲೆ ನಡೆಸಿದವರನ್ನು ಶೀಘ್ರ ಬಂಧಿಸುವಂತೆ ಬಜರಂಗ ದಳದ ವಿಭಾಗ ಸಂಚಾಲಕ ಭುಜಂಗ ಕುಲಾಲ್‌, ಜಿಲ್ಲಾ ಸಂಯೋಜಕ ಪ್ರವೀಣ್‌ ಕುತ್ತಾರ್‌ ಹಾಗೂ ಮೀನುಗಾರರ ಸಮಾವೇಶದ ಸಂಚಾಲಕ ಯಶ್‌ಪಾಲ್‌ ಸುವರ್ಣ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next