Advertisement

Bangladesh ಸಂಸದರ ಹತ್ಯೆ ಕೇಸ್‌: ಭಾರತಕ್ಕೆ ಢಾಕಾ ಅಧಿಕಾರಿಗಳ ತಂಡ

09:43 PM May 25, 2024 | Team Udayavani |

ಕೋಲ್ಕತಾ: ಬಾಂಗ್ಲಾದೇಶ ಸಂಸದ ಅನ್ವರುಲ್‌ ಅಜೀಮ್‌ ಅನಾರ್‌ ಅವರ ಹತ್ಯೆ ಪ್ರಕರಣದಲ್ಲಿ ಅವರ ಸ್ನೇಹಿತ, ಉದ್ಯಮಿ ಅಖ್ತರುಜ್ಜಮಾನ್‌ ಶಾಹೀನ್‌ ಪ್ರಮುಖ ಆರೋಪಿ ಎಂದು ಬಾಂಗ್ಲಾದೇಶ ಗೃಹ ಸಚಿವ ಅಸಾದುಜ್ಜಮಾನ್‌ ಖಾನ್‌ ಹೇಳಿದ್ದಾರೆ.

Advertisement

ಆರೋಪಿ ಶಾಹೀನ್‌ ಸದ್ಯ ನ್ಯೂಯಾರ್ಕ್‌ನಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಅವರ ಬಂಧನಕ್ಕೆ ಭಾರತ, ನೇಪಾಳ ಹಾಗೂ ಅಮೆರಿಕ ತನಿಖಾ ಸಂಸ್ಥೆಗಳ ಸಹಾಯ ಕೋರಿದ್ದೇವೆ. ಹತ್ಯೆಗೆ ಕಾರಣವನ್ನು ಶೀಘ್ರ ತಿಳಿಸಲಾಗುವುದು ಎಂದು ಹೇಳಿದ್ದಾರೆ.

ಇದೇ ವೇಳೆ, ಪ್ರಕರಣದ ತನಿಖೆಗಾಗಿ ಢಾಕಾ ಅಧಿಕಾರಿಗಳ ತಂಡವು ಭಾರತಕ್ಕೆ ಬರಲಿದೆ. 4 ಜನರ ಭಾರತೀಯ ಪೊಲೀಸರ ತಂಡ ಈಗ ತನಿಖೆಯಲ್ಲಿ ತೊಡಗಿಕೊಂಡಿದೆ ಎಂದು ಢಾಕಾದ ಮುಖ್ಯ ತನಿಖಾಧಿಕಾರಿ ಮೊಹಮ್ಮದ್‌ ರಶೀದ್‌ ತಿಳಿಸಿದ್ದಾರೆ.

ಹಣಕಾಸಿನ ವಿಚಾರದಲ್ಲಿ ಹತ್ಯೆ ನಡೆದಿರಬಹುದು ಎಂಬ ಶಂಕೆಯಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next