Advertisement

ಸೆ.25ರೊಳಗೆ ವಿಧಾನಸೌಧಕ್ಕೆ ಬಾಂಬ್ ಹಾಕ್ತಾನಂತೆ! ಬೆದರಿಕೆ ಕರೆ

05:27 PM Sep 11, 2017 | Team Udayavani |

ಬೆಂಗಳೂರು: ವಿಧಾನಸೌಧ ಹಾಗೂ ನೆಹರು ತಾರಾಲಯಕ್ಕೆ ಸೆಪ್ಟೆಂಬರ್ 25ರೊಳಗೆ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು, ಈ ಬಗ್ಗೆ ಪೊಲೀಸರು ಬೆದರಿಕೆ ಹಾಕಿದ ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಸೆಪ್ಟೆಂಬರ್ 25ರೊಳಗೆ ವಿಧಾನಸೌಧಕ್ಕೆ ನಾಗರಾಜ್ ಎಂಬಾತ ಬಾಂಬ್ ಹಾಕುತ್ತಾನೆ ಎಂದು ಸುರೇಶ್ ಎಂಬಾತ ವಿಧಾನಸೌಧ ಪೊಲೀಸ್ ನಿಯಂತ್ರಣ ಕಚೇರಿಗೆ ಬೆದರಿಕೆ ಕರೆ ಬಂದಿರುವುದಾಗಿ ವರದಿ ಹೇಳಿದೆ.

ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ವಿಧಾನಸೌಧ ಸುತ್ತಮುತ್ತ ಹೈಅಲರ್ಟ್ ಘೋಷಿಸಲಾಗಿದೆ.  ಬೆದರಿಕೆ ಕರೆ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next