Advertisement

‘Bangaluru’: ಅನ್‌ಬಾಕ್ಸ್‌  ಸಮಾರಂಭದಲ್ಲಿ ಆರ್‌ಸಿಬಿ ವನಿತೆಯರು

12:21 AM Mar 19, 2024 | Team Udayavani |

ಬೆಂಗಳೂರು: ಮಂಗಳ ವಾರ ಬೆಂಗಳೂರಿನಲ್ಲಿ ನಡೆಯಲಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡದ “ಅನ್‌ಬಾಕ್ಸ್‌ ಇವೆಂಟ್‌’ನಲ್ಲಿ ವನಿತಾ ಪ್ರೀಮಿಯರ್‌ ಲೀಗ್‌ ಚಾಂಪಿ ಯನ್‌ ಆಗಿರುವ ಆರ್‌ಸಿಬಿ ವನಿತಾ ತಂಡ ಪಾಲ್ಗೊಳ್ಳಲಿದೆ.

Advertisement

ಇದನ್ನು ಆರ್‌ಸಿಬಿ ನಾಯಕಿ ಸ್ಮತಿ ಮಂಧನಾ ಖಚಿತಪಡಿಸಿದ್ದು, ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಹಳ ಖುಷಿಯಾಗುತ್ತಿದೆ ಎಂದಿದ್ದಾರೆ.

ಕಳೆದ ವರ್ಷವೂ ಆರ್‌ಸಿಬಿ ವನಿತಾ ತಂಡ “ಅನ್‌ಬಾಕ್ಸ್‌ ಇವೆಂಟ್‌’ನಲ್ಲಿ ಪಾಲ್ಗೊಂಡಿತ್ತು. ಅಲ್ಲಿ ಆರ್‌ಸಿಬಿಯ ಮಾಜಿ ಹೀರೋಗಳಾದ ಕ್ರಿಸ್‌ ಗೇಲ್‌ ಮತ್ತು ಎಬಿ ಡಿ ವಿಲಿಯರ್ ಅವರನ್ನು ಗೌರವಿಸಲಾಗಿತ್ತು. ಈ ಬಾರಿ ಡಬ್ಲ್ಯುಪಿಎಲ್‌ ಚಾಂಪಿಯನ್‌ ತಂಡವನ್ನೇ ಗೌರವಿಸುವ ಕಾರ್ಯ ಕ್ರಮವನ್ನು ನಿರೀಕ್ಷಿಸಲಾಗಿದೆ. ಆರ್‌ಸಿಬಿ ಅಭಿಮಾನಿಗಳು ಈ ಗಳಿಗೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಫ್ರಾಂಚೈಸಿಯ ಹೆಸರು ಕೂಡ ಇದೇ ವೇಳೆ ಬದಲಾಗಲಿದೆ. ರಾಯಲ್‌ ಚಾಲೆಂಜರ್ನಲ್ಲಿದ್ದ “ಬ್ಯಾಂಗ ಳೂರ್‌’ ಎಂಬುದು “ಬೆಂಗಳೂರು’ ಎಂದಾಗಲಿದೆ.ಕಲಾವಿದರಾದ ರಿಷಭ್‌ ಶೆಟ್ಟಿ, ಅಲನ್‌ ವಾಕರ್‌ ಮೊದಲಾದವರು ಈ ಸಮಾರಂಭದಲ್ಲಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next