Advertisement

ಬೆಂಗಳೂರು: ಹೆತ್ತ ತಾಯಿಯಿಂದಲೇ 3 ವರ್ಷದ ಮಗಳ ಕೊಲೆ!

11:32 PM Apr 07, 2021 | Team Udayavani |

ಬೆಂಗಳೂರು : ತಾನು ಯಾರೊಂದಿಗೆ ಮಾತನಾಡಿದರೂ ತಂದೆಗೆ ಹೇಳುತ್ತಿದ್ದ ಮೂರು ವರ್ಷದ ಮಗಳನ್ನು ತಾಯಿಯೇ ವೇಲ್‌ ನಿಂದ ಕುತ್ತಿಗೆ ಬಿಗಿದು ಹತ್ಯೆಗೈದಿರುವ ದಾರುಣ ಘಟನೆ ಅನ್ನಪೂರ್ಣೇಶ್ವರಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಮಲ್ಲತ್ತಹಳ್ಳಿ ನಿವಾಸಿ ವೀರಣ್ಣ ಅವರ ಪುತ್ರಿ ವಿನುತಾಳನ್ನು ಕೊಲೆ ಮಾಡಿರುವ ಆರೋಪದಲ್ಲಿ ಮಗುವಿನ ತಾಯಿ ಸುಧಾ(28)ಳನ್ನು ಬಂಧಿಸಲಾಗಿದೆ.

ಚಿತ್ರದುರ್ಗ ಮೂಲದ ವೀರಣ್ಣನಿಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಕೌಟುಂಬಿಕ ಕಾರಣದಿಂದ ಮೊದಲ ಪತ್ನಿಯಿಂದ ದೂರವಿದ್ದ ಈತ ಟೋಲ್‌ಗೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸುಧಾಳನ್ನು ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಮಲ್ಲತ್ತಹಳ್ಳಿಯಲ್ಲಿ ವಾಸವಾಗಿದ್ದ ದಂಪತಿಗೆ ಮೂರೂವರೆ ವರ್ಷದ ಹೆಣ್ಣು ಮಗು ಇತ್ತು. ವೀರಣ್ಣ ಕೂಲಿ ಕಾರ್ಮಿಕನಾಗಿದ್ದು, ಸುಧಾ ಈಗ ಟೈಲ್ಸ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಕೆಲಸಕ್ಕೆ ಹೋಗುವಾಗ ಮಗಳನ್ನು ಕರೆದೊಯ್ಯುತ್ತಿದ್ದಳು.

ಈ ಮಧ್ಯೆ ವಿನುತಾಳು ತಾಯಿ ಯಾರೊಂದಿಗೆ ಮಾತನಾಡಿದರೂ, ಮನೆಗೆ ಯಾರು ಬಂದರೂ ತಂದೆಗೆ ತಿಳಿಸುತ್ತಿದ್ದಳು.  ಇದರಿಂದಾಗಿ ದಂಪತಿ ನಡುವೆ ಗಲಾಟೆಯೂ ಆಗುತ್ತಿತ್ತು.

ಗೋಬಿ ಮಂಚೂರಿ ಕೊಡಿಸಲು ಕರೆದೊಯ್ದು ಕೊಲೆ
ಮಂಗಳವಾರ ಮಧ್ಯಾಹ್ನವೂ ಟಿವಿ ನೋಡುವ ವಿಷಯದಲ್ಲಿ ದಂಪತಿ ನಡುವೆ ಜಗಳವಾಗಿದ್ದು, ಮಗಳು ತಂದೆಯ ಪರ ಮಾತಾಡಿದ್ದಳು ಎನ್ನಲಾಗಿದೆ. ಇದೇ ಕೋಪದಿಂದ ಸಂಜೆ ಸುಧಾಳು ಮಗಳನ್ನು ಗೋಬಿ ಮಂಚೂರಿ ಕೊಡಿಸುತ್ತೇನೆ ಎಂದು ಹೊರಗಡೆ ಕರೆದೊಯ್ದು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ತಾನು ಗೋಬಿ ಮಂಚೂರಿಯ ಬಿಲ್‌ ಕೊಡುತ್ತಿದ್ದಾಗ ಮಗಳು ನಾಪತ್ತೆಯಾಗಿದ್ದಳು ಎಂದು ನಂಬಿಸಿದ್ದಳು. ಬಳಿಕ ದಂಪತಿ ನಾಪತ್ತೆ ದೂರು ದಾಖಲಿಸಿದ್ದರು.

Advertisement

ಸುಳಿವು ಕೊಟ್ಟ ವೇಲ್‌
ಬುಧವಾರ ಬೆಳಗ್ಗೆ ನಿರ್ಮಾಣ ಹಂತದ ಕಟ್ಟಡದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿತ್ತು. ವಿಚಾರಣೆ ಸಂದರ್ಭದಲ್ಲಿ ಸುಧಾಳ ವರ್ತನೆ ಪೊಲೀಸರಿಗೆ ಅನುಮಾನ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಗೋಬಿ ಮಂಚೂರಿ ಅಂಗಡಿ ಮಾಲಕನನ್ನು ವಿಚಾರಿಸಿದಾಗ ಸುಧಾಳು ಪುತ್ರಿಯನ್ನು ಗೋಬಿ ಮಂಚೂರಿ ಅಂಗಡಿಗೆ ಕರೆದೊಯ್ದಿರಲಿಲ್ಲ ಎಂಬುದು ಗೊತ್ತಾಗಿತ್ತು. ಬಳಿಕ ಮನೆಯಲ್ಲಿ ತಪಾಸಣೆ ನಡೆಸಿದಾಗ ಕೃತ್ಯಕ್ಕೆ ಬಳಸಿದ್ದ ವೇಲ್‌ನಲ್ಲಿ ರಕ್ತ ಅಂಟಿ ಕೊಂಡಿರುವುದು ಪತ್ತೆಯಾಗಿದೆ. ಕೂಡಲೇ ಪೊಲೀಸರು ಆಕೆಯನ್ನು ವಶಕ್ಕೆ ಪಡೆದುಕೊಂಡರು. ಆಕೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next