Advertisement

ಹುಲುಕುಡಿ ಗಿರಿ ಪ್ರದಕ್ಷಿಣೆ ಸಂಪನ್ನ

05:40 PM Jul 25, 2021 | Team Udayavani |

ದೊಡ್ಡಬಳ್ಳಾಪುರ: ತಾಲೂಕಿನಐತಿಹಾಸಿಕ ಹುಲುಕುಡಿ ಕ್ಷೇತ್ರದಲ್ಲಿಹುಲುಕುಡಿ ಗಿರಿ ಪ್ರದಕ್ಷಿಣೆ ಕಾರ್ಯಕ್ರಮಯಶಸ್ವಿಯಾಗಿ ನೆರವೇರಿತು.ಬೆಟ್ಟದ ತಪ್ಪಲಿನ ವೀರಗಣಪತಿದೇವಾಲಯದಲ್ಲಿ ಪೂಜೆ ಸಲ್ಲಿಸುವಮೂಲಕ ಬೆಳಗ್ಗೆ 9 ಗಂಟೆಗೆಆರಂಭವಾದ ಪಾದಯಾತ್ರೆಯಲ್ಲಿವಿವಿಧೆಡೆಗಳಿಂದ ಆಗಮಿಸಿದ್ದ ನೂರಾರುಜನ ಭಕ್ತಾದಿಗಳು ಭಾಗವಹಿಸಿದ್ದರು.

Advertisement

8 ಕಿ.ಮೀ ಪಾದಯಾತ್ರೆ: ಹುಲುಕುಡಿಬೆಟ್ಟದ ತಪ್ಪಲಿನಿಂದ ಆರಂಭವಾದ ಗಿರಿಪ್ರದಕ್ಷಿಣೆ ಹಳೇಕೋಟೆ, ತಳಕಿನ ಕೆರೆ,ಮಾಡೇಶ್ವರ ಮಾರ್ಗವಾಗಿ ಸುಮಾರು8 ಕಿ.ಮೀ. ಸಾಗಿ ಮಧ್ಯಾಹ್ನ 1.30ಗಂಟೆಗೆ ಮುಕ್ತಾಯವಾಯಿತು.ಹುಲುಕುಡಿ ಬೆಟ್ಟದ ತಪ್ಪಲಿನಮಾಡೇಶ್ವರದಲ್ಲಿ ಚೋಳರ ಕಾಲದಲ್ಲಿಸ್ಥಾಪಿತವಾಗಿರುವ ಬೃಹತ್‌ಶಿವಲಿಂಗಮೂರ್ತಿ ಹೊಂದಿರುವ ಮುಕ್ಕಣ್ಣೇಶ್ವರ, ಬಸವಣ್ಣ,ಹಾಲು ಬಾವಿ ಆಂಜನೇಯಸ್ವಾಮಿ,ಬೊನ್ನಹಳ್ಳಿ ಗ್ರಾಮದಲ್ಲಿನಚನ್ನಕೇಶವಸ್ವಾಮಿ, ನರಸಿಂಹಸ್ವಾಮಿ,ಚೌ ಡೇ ಶ್ವರಿ ದೇವರ ದರ್ಶನಗಳನ್ನುಮಾಡಿ ಭಕ್ತಾದಿಗಳು ಪುನೀತರಾದರು.

ಗಿರಿಪ್ರದಕ್ಷಿಣೆಯಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಶ್ರೀ ಹುಲುಕುಡಿವೀರಭದ್ರಸ್ವಾಮಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್‌ವತಿಯಿಂದ ಅನ್ನಸಂತರ್ಪಣೆನಡೆಯಿತು. ಗಿರಿ ಪ್ರದಕ್ಷಿಣೆಯಲ್ಲಿಪಾಲ್ಗೊಂಡಿದ್ದ ಭಕ್ತಾದಿಗಳಿಗೆಮಾರ್ಗದುದ್ದಕ್ಕೂ ಪಾನಕ, ಮಜ್ಜಿಗೆ,ಕೋಸಂಬರಿ ವಿತರಣೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next