Advertisement

Bangalore: ನಿಂತಿದ್ದ ಕ್ಯಾಂಟರ್‌ಗೆ ಸೈಕಲ್‌ ಡಿಕ್ಕಿ: ಟೆಕಿ ಸಾವು

12:32 PM Dec 07, 2023 | Team Udayavani |

ಬೆಂಗಳೂರು: ಟೈಯರ್‌ ಪಂಕ್ಚರ್‌ ಆಗಿ ರಸ್ತೆ ಬದಿ ನಿಂತಿದ್ದ ಗೂಡ್ಸ್‌ ಕ್ಯಾಂಟರ್‌ಗೆ ಹಿಂದಿನಿಂದ ಸೈಕಲ್‌ನಲ್ಲಿ ಬಂದು ಡಿಕ್ಕಿ ಹೊಡೆದುಕೊಂಡ ಪರಿಣಾಮ ಟೆಕಿ ಮೃತಪಟ್ಟಿರುವ ಘಟನೆ ಕೆ.ಜಿ.ಹಳ್ಳಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಎಚ್‌ಬಿಆರ್‌ ಲೇಔಟ್‌ ನಿವಾಸಿ ರಾಮಕೃಷ್ಣನ್‌(51) ಮೃತ ಟೆಕಿ.

ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿರುವ ರಾಮಕೃಷ್ಣನ್‌ಗೆ ನಿತ್ಯ ಸೈಕ್ಲಿಂಗ್‌ ಮಾಡುವ ಹವ್ಯಾಸ ಇತ್ತು. ಹೀಗಾಗಿ ಬುಧವಾರ ಮುಂಜಾನೆ 5.30ರ ಸುಮಾರಿಗೆ ಸೈಕ್ಲಿಂಗ್‌ ಮಾಡಿಕೊಂಡು ಹೆಣ್ಣೂರು-ನಾಗವಾರ ರಸ್ತೆಯಲ್ಲಿ ಹೋಗುತ್ತಿದ್ದರು.

ಇದೇ ವೇಳೆ ಟೈಯರ್‌ ಪಂಕ್ಚರ್‌ ಆಗಿ ಗೂಡ್ಸ್‌ ಕ್ಯಾಂಟರ್‌ ರಸ್ತೆ ಬದಿ ನಿಂತಿತ್ತು. ಆದರೆ, ಚಾಲಕ ಯಾವುದೇ ಸಿಗ್ನಲ್‌ ಲೈಟ್‌ ಹಾಕಿರಲಿಲ್ಲ. ಮತ್ತೂಂದೆಡೆ ಸೈಕಲ್‌ನಲ್ಲಿ ಅತೀವೇಗವಾಗಿ ಬಂದ ರಾಮಕೃಷ್ಣನ್‌ ನಿಯಂತ್ರಿಸಲು ಸಾಧ್ಯವಾಗದೆ ಕ್ಯಾಂಟರ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದುಕೊಂಡಿದ್ದಾರೆ. ಪರಿಣಾಮ ಅವರ ಮುಖಕ್ಕೆ ಬಲವಾಗಿ ಪೆಟ್ಟು ಬಿದ್ದಿತ್ತು. ಕೂಡಲೇ ಕ್ಯಾಂಟರ್‌ ಚಾಲಕ ಆ್ಯಂಬುಲೆನ್ಸ್‌ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಬಳಿಕ ಸ್ಥಳೀಯರು ಆ್ಯಂಬುಲೆನ್ಸ್‌ನಲ್ಲಿ ರಾಮಕೃಷ್ಣನ್‌ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ.

Advertisement

ಆದರಿಂದ ಘಟನೆ ಸಂಬಂಧ ಯಾವುದೇ ಸೂಚನಾ ಫ‌ಲಕ ಹಾಕದೇ ಕ್ಯಾಂಟರ್‌ ನಿಲ್ಲಿಸಿದ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು. ಕೆ.ಜಿ.ಹಳ್ಳಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next