Advertisement

ಸಾರಿಗೆ ನೌಕರರ ವಜಾ ಆದೇಶ ಹಿಂಪಡೆಯುವಂತೆ  ಸಿಎಂಗೆ ಮನವಿ

09:31 AM Aug 25, 2021 | Team Udayavani |

ಬೆಂಗಳೂರು : ಸಾರಿಗೆ ನೌಕರರ  ಮುಷ್ಕರದಲ್ಲಿ ಭಾಗಿಯಾಗಿದ್ದ ಕೆಲ‌ ಸಾರಿಗೆ ನೌಕರರ ವಜಾ ಹಿನ್ನೆಲೆಯಲ್ಲಿ  ವಜಾ ಆದೇಶ ಹಿಂಪಡೆಯುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಆರ್ ಟಿ ನಗರದ ನಿವಾಸದಲ್ಲಿ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಿದ್ದು, ಮುಷ್ಕರದ ವೇಳೆ ವಜಾಗೊಂಡಿದ್ದ ನೌಕರರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು. ಈ ನಡುವೆ ಜುಲೈ ತಿಂಗಳಿನ ವೇತನ ಬಿಡುಗಡೆಗೂ ಮನವಿ ನೀಡಲಾಗಿದೆ.

ಇದನ್ನೂ ಓದಿ:ಮಟ್ಟುವಿನಲ್ಲಿ ಮನೆಗೆ ಬೆಂಕಿ, ಸುಟ್ಟು ಕರಕಲಾದ ಮನೆಯ ಮೇಲ್ಛಾವಣಿ -50 ಸಾವಿರಕ್ಕೂ ಅಧಿಕ ನಷ್ಟ

ಕಳೆದ ಏಪ್ರಿಲ್ ನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆ ಕುರಿತಂತೆ  ಮುಷ್ಕರ ಮಾಡಿದ್ದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ 2109 ಸಾರಿಗೆ ನೌಕರರನ್ನು  ವಜಾ ಮಾಡಿದ್ದು, 500ಕ್ಕೂ ಹೆಚ್ಚು ನೌಕರರನ್ನು ದೂರದ ಸ್ಥಳಗಳಿಗೆ ವರ್ಗಾವಣೆ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next