Advertisement

ರಬಕವಿ-ಬನಹಟ್ಟಿ : 5.98 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿ, ಹಣ ಕಳ್ಳತನ

12:02 PM Jun 14, 2022 | Team Udayavani |

ರಬಕವಿ-ಬನಹಟ್ಟಿ: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಕೆರೆ ರಸ್ತೆಯ ಮನೆಯೊಂದಕ್ಕೆ ಕನ್ನ ಹಾಕಿ 5.98 ಲಕ್ಷ ಮೌಲ್ಯದ ಬಂಗಾರ, ಬೆಳ್ಳಿ, ಹಣ ಕಳ್ಳತನವಾದ  ಘಟನೆ ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಬನಹಟ್ಟಿಯ ಕೆರೆ ರಸ್ತೆಯಲ್ಲಿರುವ ಉದಯ ಕುಮಾರ ರಾಮರಾವ್ ದೇಶಪಾಂಡೆ ಎಂಬುವವರ ಮನೆಯ ಕೀಲಿ ಮತ್ತು ಬಾಗಿಲಿನ ಕೊಂಡಿಯನ್ನು ಮುರಿದು ಮನೆಯ ಬೆಡ್ ರೂಮ್‌ನ ಟ್ರೇಝರಿಯ ಮುಖ್ಯ ಬಾಗಿಲನ್ನು ಯಾವುದೋ ಬಿರುಸು ವಸ್ತುವಿನಿಂದ ತೆಗೆದು ಟ್ರೇಝರಿಯಲ್ಲಿ ಇಟ್ಟಿದ್ದ ಸೇಫ್ ಲಾಕರ್ ಬೀಗ ಬಳಸಿ ಸೇಫ್ ಲಾಕರ್ ನಲ್ಲಿದ್ದ 128 ಗ್ರಾಂ ಬಂಗಾರ, 1267 ಗ್ರಾಂ ಬೆಳ್ಳಿ, 11000/- ಹಣ ಸೇರಿದಂತೆ ಒಟ್ಟು 5,98,500/- ಮೌಲ್ಯದ ಬಂಗಾರ, ಬೆಳ್ಳಿ ಹಾಗೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಉದಯ ಕುಮಾರ ದೇಶಪಾಂಡೆ ಬನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಕ್ರೈಂ ಪಿಎಸ್‌ಐ ಪಿ. ಬಿ. ಪೂಜಾರಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ತನಿಖೆ ಮುಂದುವರೆಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next