Advertisement

ಭಾರಿ ಮಳೆಗೆ ಧರೆಗುರುಳಿದ ಮರ : ಸಿನಿಮೀಯ ರೀತಿಯಲ್ಲಿ ಪಾರಾದ ಕುಟುಂಬ

06:10 PM Jun 07, 2022 | Team Udayavani |

ರಬಕವಿ-ಬನಹಟ್ಟಿ : ಕಳೆದ ಸೋಮವಾರ ರಾತ್ರಿ ಹೊತ್ತು ಭಾರಿ ಸಿಡಿಲಿನಿಂದ ಸುರಿದ ಧಾರಾಕಾರ ಮಳೆಯಲ್ಲಿ ಮರವೊಂದು ಧರೆಗುರುಳಿದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸಿನಿಮೀಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ಜರುಗಿದೆ.

Advertisement

ಬನಹಟ್ಟಿಯ ಅಶೋಕ ಕಾಲನಿಯ ವಾರ್ಡ್ ನಂ.16ರ ಬಡನೇಕಾರ ಕುಟುಂಬವಾದ ಕುಮಾರ ಜಾಡಗೌಡ ಅವರ ಮನೆಗೆ ಅಂಟಿಕೊಂಡೇ ಬೃಹತ್ ಮರವೊಂದು ಭಾರಿ ಗಾಳಿ, ಸಿಡಿಲು ಹಾಗು ಮಳೆಗೆ ಮೇಲ್ಛಾವಣೆ ಮೇಲೆ ಬಿದ್ದ ಪರಿಣಾಮ ಗೋಡೆಯ ಮೇಲಿಂದ ಇಡೀ ಮರವು ಮನೆಯೊಳಗೆ ಬಿದ್ದಿದೆ. ಮನೆಯೊಳಗೆ ರಾತ್ರಿ ಹೊತ್ತು ನಿದ್ರೆಯಲ್ಲಿದ್ದ ಸಮಯದಲ್ಲಿ ಕೇವಲ ಅಡಿಯಷ್ಟು ಮಾತ್ರ ಅಂತರದಿಂದ ಗೋಡೆಗೆ ತಾಕಿ ನಿಂತಿರುವದರಿಂದ ಇಡೀ ಕುಟುಂಬ ಪ್ರಾಣಾಪಾಯದಿಂದ ಪಾರಾಗುವಂತಾಗಿದೆ.

ಮನೆಯ ಮೇಲಿದ್ದ ಪತ್ರಾಸ ಮೇಲ್ಚಾವಣಿಗಳು ಮನೆಯೊಳಗೆ ಮುರಿದು ಬಿದ್ದು ಭಾರಿ ಶಬ್ದವಾದ್ದರಿಂದ ಎಚ್ಛೆತ್ತ ಕುಮಾರ ಹಾಗು ಆತನ ಪತ್ನಿ ತೀವ್ರ ಗಾಬರಿಗೊಂಡು ಸತ್ತೇ ಹೋದೆವು ಎಂದು ಗಾಬರಿಯಿಂದ ಮಕ್ಕಳೊಂದಿಗೆ ಮನೆಯಿಂದ ಹೊರಗೆ ಬಂದ ಪ್ರಸಂಗ ನಡೆಯಿತು.

ಇದನ್ನೂ ಓದಿ : ರಾಜಕೀಯ ವಿರೋಧಿ ಸಿದ್ಧರಾಮಯ್ಯ ಜತೆ ಮಾತನಾಡೋಕೇನಿದೆ: ಬಿಎಸ್‌ವೈ

Advertisement
Advertisement

Udayavani is now on Telegram. Click here to join our channel and stay updated with the latest news.

Next