Advertisement

ಬನಹಟ್ಟಿ : 15 ದಿನಗಳಲ್ಲಿ ಎರಡು ಕುಟುಂಬದ ನಾಲ್ವರ ಸಾವು ..!

08:08 PM Jun 18, 2021 | Team Udayavani |

ಬನಹಟ್ಟಿ : ಕೊರೊನಾ 2ನೇ ಅಲೆ ಎಂಬ ಮಹಾಮಾರಿಗೆ 14 ದಿನಗಳಲ್ಲಿ ಎರಡು ಕುಟುಂಬಗಳ ಸಂಬಂಧಿಗಳಲ್ಲಿ ಇಬ್ಬರು ಕೊರೊನಾದಿಂದ ಮೃತಪಟ್ಟರೆ ಮತ್ತಿಬ್ಬರು ಅಸ್ತಮಾದಿಂದ ಒಟ್ಟು ನಾಲ್ವರು ಬಲಿಯಾದ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ನಡೆದಿದೆ.

Advertisement

ಕೊರೊನಾ 2ನೇ ಅಲೆ ಬಹಳಷ್ಟು ಜನರಿಗೆ ಇನ್ನಿಲ್ಲದ ತೊಂದರೆ ಕೊಟ್ಟಿದೆ. ಮದುವೆ, ಮಕ್ಕಳೊಂದಿಗೆ ಸುಂದರ ಬದುಕು ನಡೆಸುತ್ತಿದ್ದವರ ಬಾಳಿಗೆ ಕೊಳ್ಳಿ ಇಡುತ್ತಿದೆ. ವಾರದ ಹಿಂದೆ ನೆಮ್ಮದಿಯ ಬದುಕು ನಡೆಸುತ್ತಿದ್ದವರ ಕುಟುಂಬಗಳೀಗ ಸಂಕಷ್ಟಕ್ಕೆ ಒಳಗಾಗುತ್ತಿದೆ. ಕುಟುಂಬಸ್ಥರನ್ನು ಕಳೆದುಕೊಂಡ ಮನೆಯಲ್ಲಿ ನೀರವ ಮೌನ ತಾಳಿದೆ.

ಇದನ್ನೂ ಓದಿ :ಕೋವಿಡ್: ರಾಜ್ಯದಲ್ಲಿಂದು 15290 ಸೋಂಕಿತರು ಗುಣಮುಖ; 5783 ಹೊಸ ಪ್ರಕರಣ ಪತ್ತೆ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ಶಿರಹಟ್ಟಿ ಹಾಗೂ ಪಡನಡಿ ಸಂಬಂಧಿಗಳಲ್ಲಿ ಬಾಳಪ್ಪ ಶಿರಹಟ್ಟಿ(89) ಹಾಗೂ ಸುಮಿತ್ರಾ ಭೂಪಾಲ ಶಿರಹಟ್ಟಿ(61) ಇಬ್ಬರೂ ಚಿಕಿತ್ಸೆ ಫಲಿಸದೆ ಕೊರೊನಾದಿಂದ ಮೃತಪಟ್ಟಿದ್ದರೆ ಕಾಶವ್ವ ಶ್ರೀಪಾಲ ಪಡನಡಿ(42) ಹಾಗೂ ಶೋಭಾ ಅಲ್ಲಪ್ಪ ಪಡನಡಿ(25) ಅಸ್ತಮಾ ರೋಗಕ್ಕೆ ಬಲಿಯಾಗಿದ್ದು, ಇವರೆಲ್ಲರ ಸಾವು 15 ದಿನಗಳಲ್ಲಾಗಿರುವದು ಉಭಯ ಕುಟುಂಬಗಳನ್ನು ತಲ್ಲಣಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next