Advertisement

ಬನಹಟ್ಟಿ: ಸಂಭ್ರಮದ ವಿಶ್ವಕರ್ಮರ ಮಹೋತ್ಸವ

07:35 PM Dec 02, 2022 | Team Udayavani |

ರಬಕವಿ-ಬನಹಟ್ಟಿ: ಬನಹಟ್ಟಿಯ ವಿಶ್ವಕರ್ಮ ಸಮಾಜದ ವತಿಯಿಂದ ವಿಶ್ವಕರ್ಮರ ಮಹೋತ್ಸವ ನಗರದಲ್ಲಿ ಶುಕ್ರವಾರ ಸಂಭ್ರಮ ಸಡಗರದಿಂದ ನಡೆಯಿತು.

Advertisement

ಮಹೋತ್ಸವದ ನಿಮಿತ್ತವಾಗಿ ಬನಹಟ್ಟಿಯ ಲಕ್ಷ್ಮಿ ನಗರದ ಲಕ್ಷ್ಮಿ ದೇವಸ್ಥಾನದ ಹತ್ತಿರ ಬೆಟ್ಟದ ಮೇಲಿರುವ ವಿಶ್ವಕರ್ಮರ ದೇವಸ್ಥಾನದಿಂದ ಪಲ್ಲಕ್ಕಿ ಉತ್ಸವದ ಮೆರವಣಿಗೆ ಆರಂಭಗೊಂಡು ನಗರ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮೇಳದೊಂದಿಗೆ ಸಂಚರಿಸಿ ಮತ್ತೆ ದೇವಸ್ಥಾನದ ಆವರಣವನ್ನು ತಲುಪಿತು.

ಈ ಸಂದರ್ಭದಲ್ಲಿ ಗಾಯತ್ರಿ ಮಹಿಳಾ ಮಂಡಳದ ಮುತ್ತೈದೆಯರು ಕುಂಭ ಮತ್ತು ಆರತಿ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕರಡಿ ಹಾಗೂ ಸಾಂಬಾಳ ವಾದನ ಹಾಗೂ ಪುರುವಂತರು ನಗರದ ಪ್ರಮುಖ ಸ್ಥಳಗಳಲ್ಲಿ ವೀರಗಾಸೆ ಕಲೆಯನ್ನು ಪ್ರದರ್ಶನ ಮಾಡಿ ಗಮನ ಸೆಳೆದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮೌನೇಶ ಬಡಿಗೇರ, ರಾಜು ಬಡಿಗೇರ, ಕಾಳಪ್ಪ ಬಡಿಗೇರ, ಕಲ್ಲಪ್ಪ ಪತ್ತಾರ, ಅರವಿಂದ ಪತ್ತಾರ, ಮೋಹನ ಪತ್ತಾರ, ಚಿದಾನಂದ ಪತ್ತಾರ, ಅಶೋಕ ಪತ್ತಾರ, ರವಿ ಪತ್ತಾರ, ಅನೀಲ ಬಡಿಗೇರ, ಅಚ್ಯುತ ಪತ್ತಾರ, ಕುಮಾರ ಪತ್ತಾರ, ನಾಗಲಿಂಗ ಪತ್ತಾರ, ಚಂದು ಬಡಿಗೇರ, ಮಲ್ಲಿಕಾರ್ಜುನ ಪತ್ತಾರ, ಮಂಜು ಪತ್ತಾರ, ರಮೇಶ ಬಡಿಗೇರ, ಕಾಳಪ್ಪ ಪತ್ತಾರ, ಬೀಮರಾಯ ಪತ್ತಾರ, ಪ್ರಮೋದ ಪತ್ತಾರ, ಸಚಿನ ಪತ್ತಾರ, ಲಲಿತಾ ಪತ್ತಾರ, ಕಲಾ ಪತ್ತಾರ, ಶೃತಿ ಪತ್ತಾರ, ಸ್ನೇಹಾ ಪತ್ತಾರ, ದ್ರಾಕ್ಷಾಯಣಿ ಬಡಿಗೇರ, ಸವಿತಾ ಬಡಿಗೇರ, ರಾಣಿ ಪತ್ತಾರ, ಪ್ರೀತಿ ಬಡಿಗೇರ, ಜ್ಯೋತಿ ಬಡಿಗೇರ, ಶ್ವೇತಾ ಪತ್ತಾರ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next