Advertisement

ಕೊಲೆ ಪ್ರಕರಣದ ಹಿಂದಿರುವ ಸಂಘಟನೆಗಳನ್ನು ಮಟ್ಟ ಹಾಕಿ: ಯು.ಟಿ.ಖಾದರ್ ಆಗ್ರಹ

02:28 PM Jul 29, 2022 | Team Udayavani |

ಸುರತ್ಕಲ್: ಬೆಳ್ಳಾರೆ ಮಸೂದ್, ಪ್ರವೀಣ್ ನೆಟ್ಟಾರು, ಸುರತ್ಕಲ್ ಫಾಝಿಲ್ ಹತ್ಯೆ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಇದರ ಬಗ್ಗೆ ಸಮರ್ಥ ತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸಬೇಕು ಎಂದು ವಿಧಾನ ಸಭಾ ಪ್ರತಿಪಕ್ಷ ದ ಉಪನಾಯಕ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.

Advertisement

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾವ ಸಂಘಟನೆಗಳು ಕುಮ್ಮಕ್ಕು ನೀಡಿದೆಯೋ ಅವುಗಳನ್ನು ಮಟ್ಟ ಹಾಕುವ ಕೆಲಸವನ್ಬು ಪೊಲೀಸ್ ಇಲಾಖೆ ಹಾಗೂ ಸರಕಾರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ನಮಗೆ ಎಲ್ಲ ಜನರ ಜೀವವೂ ಮುಖ್ಯ: ಸಿಎಂ ಬಸವರಾಜ ಬೊಮ್ಮಾಯಿ

ಸರಕಾರ ಈ ರೀತಿ ಮತಾಂಧ ಶಕ್ತಿಗಳಿಂದ ಹತ್ಯೆಗೀಡಾದವರಿಗೆ ಪರಿಹಾರ ನೀಡುವುದು ತೆರಿಗೆ ದುಡ್ಡಿನಿಂದ. ಹಾಗಾಗಿ ಹತ್ಯೆಗೀಡಾದ ಎಲ್ಲ ಮೂವರ ಹೆತ್ತವರ ನೋವನ್ನು ಸಮಾನವಾಗಿ ಪರಿಗಣಿಸಿ ಪಕ್ಷಪಾತವಿಲ್ಲದೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next