Advertisement

ಕೃಷಿ ಕಾಯ್ದೆ ರದ್ಧ ತಿಗೆ ಒತ್ತಾಯಿಸಿ ಮನವಿ

04:11 PM Jan 31, 2021 | Team Udayavani |

ಸಿರುಗುಪ್ಪ: ಕರ್ನಾಟಕ ರಾಜ್ಯ·ರೈತ ಸಂಘ ಮತ್ತು ಹಸಿರು ಸೇನೆ·(ಪ್ರೊ|ನಂಜುಂಡಸ್ವಾಮಿ ಬಣ) ತಾಲೂಕುಘಟಕದಿಂದ ಕೇಂದ್ರ ಸರ್ಕಾರ ಜಾರಿಗೆತಂದಿರುವ ಕೃಷಿ ವಿರುದ್ಧದ ಮೂರುಕಾನೂನುಗಳನ್ನು ರದ್ದುಗೊಳಿಸಲುಗ್ರಾಪಂನಲ್ಲಿನ ಆಡಳಿತ ಮಂಡಳಿನಿರ್ಣಯಿಸಿ ರಾಷ್ಟ್ರಪತಿಗಳಿಗೆ ಸಲ್ಲಿಸುವಂತೆಒತ್ತಾಯಿಸಿ ಎಚ್‌. ಹೊಸಳ್ಳಿ ಗ್ರಾಪಂಅಧ್ಯಕ್ಷೆ ಮುದಿಯಮ್ಮರಿಗೆ ಶನಿವಾರಮನವಿ ಸಲ್ಲಿಸಲಾಯಿತು. ಕರ್ನಾಟಕರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ(ಪ್ರೊ| ನಂಜುಂಡಸ್ವಾಮಿ ಬಣ) ರಾಜ್ಯಕಾರ್ಯಾಧ್ಯಕ್ಷ ಆರ್‌.ಮಾಧವರೆಡ್ಡಿಮಾತನಾಡಿ, ಈ ಕಾನೂನುಗಳು ಜಾರಿಗೆಬಂದರೆ ರಾಜ್ಯಗಳು ಕೃಷಿ ಕ್ಷೇತ್ರದಮೇಲಿನ ಹಕ್ಕುಗಳನ್ನು ಕಳೆದುಕೊಳ್ಳುತ್ತವೆ.ರೈತರು ಕೃಷಿ ಹಾಗೂ ಗ್ರಾಮಗಳನ್ನುತೊರೆಯಬೇಕಾಗುತ್ತದೆ ಎಂದರು.

Advertisement

ಇದೇ ರೀತಿಯಾಗಿ ತಾಲೂಕಿನಬೈರಾಪುರ, ಕರೂರು, ಶಾನವಾಸಪುರ,ತಾಳೂರು ಗ್ರಾಪಂ ಅಧ್ಯಕ್ಷರಿಗೆ ಕೃಷಿಕಾಯ್ದೆಗಳನ್ನು ವಿರೋಧಿ ಸಿ ನಿರ್ಣಯತೆಗೆದುಕೊಳ್ಳಲು ಮನವಿ ಸಲ್ಲಿಸಲಾಗಿದೆಎಂದು ಹೇಳಿದರು.

ತಾಲೂಕು ಅಧ್ಯಕ್ಷ ವಾ. ಹುಲುಗಯ್ಯ,ಪದಾ ಧಿಕಾರಿಗಳಾದ ಎಚ್‌. ಹಳ್ಳಪ್ಪ,ದ್ಯಾವಪ್ಪ, ಕೆ.ಎಸ್‌. ತಿಮ್ಮಪ್ಪ, ಎ. ಈರಣ್ಣ,ಜಿ. ರಂಗನಗೌಡ, ವೈ. ಕೃಷ್ಣಾರೆಡ್ಡಿ,ಮಂಜುನಾಥ, ವೀರಭದ್ರಗೌಡ,ಹನುಮೇಶ ಇದ್ದರು.

ಓದಿ :·ಬಾಲಕಿಯರಿಗೆ ಉನ್ನತಾಧಿ ಕಾರದ ಗೌರವ

Advertisement

Udayavani is now on Telegram. Click here to join our channel and stay updated with the latest news.

Next