Advertisement

ರೈತ ವಿರೋಧಿ ಕಾಯ್ದೆ ಜಾರಿಯಿಂದ ಸಂಕಷ್ಟ

03:33 PM Jan 31, 2021 | Team Udayavani |

ಹೊಸಪೇಟೆ: ರೈತ-ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿ ತರುವ ಮೂಲಕ ಸರ್ಕಾರ ರೈತ-ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ
ಎಂದು ಕಾರ್ಮಿಕ ಮುಖಂಡ ಯು. ಬಸವರಾಜ ಕಿಡಿಕಾರಿದರು.

Advertisement

ಮಹಾತ್ಮ ಹುತಾತ್ಮ ದಿನಾಚರಣೆ ಹಾಗೂ ರೈತ-ಕಾರ್ಮಿಕ ವಿರೋಧಿ ನೀತಿ ಖಂಡಿಸಿ, ನಗರದ ಪಶುಸಂಗೋಪನೆ ಇಲಾಖೆ ಆವರಣದಲ್ಲಿ ನಗರದ ವಿವಿಧ ಕಾರ್ಮಿಕ ಸಂಘಟನೆಗಳ ಜಂಟಿ ಹೋರಾಟ ವೇದಿಕೆ ವತಿಯಿಂದ ಶನಿವಾರ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ
ಅವರು, ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿ, ಕಳೆದ 70 ದಿನಗಳಿಂದ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಕೇಂದ್ರ ಸರ್ಕಾರ ಹತ್ತಿಕ್ಕಲು, ಪೊಲೀಸರ ಮೂಲಕ ದೌರ್ಜನ್ಯ ನಡೆಸುತ್ತಿದೆ. ಇದೊಂದು ಕೇವಲ ರೈತ-ಕಾರ್ಮಿಕರ ಹೋರಾಟವಲ್ಲ. ಇದೊಂದು ಎರಡನೇ ಸ್ವಾತಂತ್ರ ಸಂಗ್ರಾಮವಾಗಿದ್ದು, ಬೇಡಿಕೆ ಈಡೇರುವವರಗೆ ನಿಲ್ಲುವುದಿಲ್ಲ ಎಂದರು. ಮುಖಂಡರಾದ ಆರ್‌. ಎಸ್‌. ಬಸವರಾಜ, ಎಂ.ಜಂಬಯ್ಯನಾಯಕ, ಆರ್‌. ಭಾಸ್ಕರರೆಡ್ಡಿ, ಎ.ಕರುಣಾನಿಧಿ , ನಾಗರತ್ನಮ್ಮ, ಯಲ್ಲಾಲಿಂಗ, ಕೆ.ಎಂ.ಸಂತೋಷ, ಗೋಪಾಲ ಇನ್ನಿತರರಿದ್ದರು.

ಓದಿ : ಪಂಚಲಕ್ಷ ಪಾದಯಾತ್ರೆಯಲ್ಲಿ ಸಿಎಂ ಬಿಎಸ್‌ವೈ ಪ್ರತಿಕೃತಿ ದಹನ

Advertisement

Udayavani is now on Telegram. Click here to join our channel and stay updated with the latest news.

Next