Advertisement

ದೇಶದ ಗಡಿ ಕಾಯುವುದು ಹೆಮ್ಮೆಯ ಕಾಯಕ

05:46 PM Jan 28, 2021 | Team Udayavani |

ಬಳ್ಳಾರಿ: ಭಾರತ ದೇಶದ ಮಣ್ಣಿನಲ್ಲಿ ಹುಟ್ಟುವುದೇ ಪುಣ್ಯ. ಅದರಲ್ಲಿಯೂ ಭಾರತ ಮಾತೆಯ ಸೇವೆ ಮಾಡುವುದೇ ಒಂದು ಭಾಗ್ಯ. ಆ ನಿಟ್ಟಿನಲ್ಲಿ ದೇಶದ ಗಡಿ ಕಾಯುವ ನಮ್ಮ ಸೈನಿಕರು ನಿಯಜವಾಗಿಯೂ ಅವರು ನಮ್ಮೆಲ್ಲರಿಗೂ ಹೆಮ್ಮ ಎಂದು ಹಿರಿಯ ಬಯಲಾಟ ಕಲಾವಿದೆ, ರಾಜ್ಯ
ಪ್ರಶಸ್ತಿ ಪುರಸ್ಕೃತೆ ಚಾಮುಂಡೇಶ್ವರಿ ಅಭಿಪ್ರಾಯಪಟ್ಟರು.

Advertisement

ನಗರದ ಗುಗ್ಗರಹಟ್ಟಿಯಲ್ಲಿ ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದಿಂದ ಮಂಗಳವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಭಾರತೀಯ ಸೇನೆಯಲ್ಲಿ ಸುಮಾರು 15 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಗುಗ್ಗರಹಟ್ಟಿಯ ಜಿ.ನಾಗರಾಜ್‌ ಅವರನ್ನು ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಹಿಂದಿ ಶಿಕ್ಷಕಿ ಸರೋಜಾ ಬ್ಯಾತನಾಳ್‌, ಮುಖ್ಯ ಅತಿಥಿಗಳಾಗಿ ರಂಗಭೂಮಿ ಕಲಾವಿದ ಅಮರೇಶಯ್ಯಸ್ವಾಮಿ, ಮಾಜಿ ಸೈನಿಕರ ಕುಟುಂಬದ ಎಲ್ಲ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರಂಭದಲ್ಲಿ ಹರಿಕೃಷ್ಣ ಪ್ರಾರ್ಥಿಸಿದರು. ಕಲಾ ತಂಡದ ಅಧ್ಯಕ್ಷ ಕೆ.ಹೊನ್ನೂರುಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಅಮಾತಿ ಬಸವರಾಜ್‌ ನಿರೂಪಿಸಿ, ಸ್ವಾಗತಿಸಿದರು.

ಛಾಯಾಗ್ರಾಹಕ ಶಿವರಾಜಗೌಡ, ತೊಗಲುಗೊಂಬೆ ಕಲಾವಿದರ ಪ್ರಭು, ಬಸವರಾಜ್‌ ಆಚಾರಿ, ಪುರುಷೋತ್ತಮ, ಶ್ರೀಕಾಂತ್‌ ಇದ್ದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯ ಕ್ರಮದಲ್ಲಿ ದೇಶಭಕ್ತಿ ಗೀತೆಗೆ ಅಕ್ಷತಾ ಎಂ. ತುರಾಯಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ, ಗುಗ್ಗರಹಟ್ಟಿ ಮಕ್ಕಳಿಂದ ಸಮೂಹ ನೃತ್ಯ ಕಾರ್ಯಕ್ರಮ ಜರುಗಿದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next