Advertisement

ಡಾ|ಸಿದ್ದಲಿಂಗಯ್ಯ ಅಗಲಿಕೆ ತುಂಬಲಾರದ ನಷ್ಟ

09:21 PM Jun 13, 2021 | Team Udayavani |

ಬಳ್ಳಾರಿ: ಕನ್ನಡದ ಖ್ಯಾತ ಕವಿ ಬಂಡಾಯ ಸಾಹಿತಿ ಡಾ| ಸಿದ್ದಲಿಂಗಯ್ಯ ಅವರ ನಿಧನಕ್ಕೆ ನಗರದ ಅಂಬೇಡ್ಕರ್‌ ಭವನದ ಆವರಣದಲ್ಲಿರುವ ಡಾ| ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿ ಬಳಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ಶನಿವಾರ ಶ್ರದ್ಧಾಂಜಲಿ ಸಲ್ಲಿಸಿದರು.

Advertisement

ಇದೇ ವೇಳೆ ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮಿತಿ ರಾಜ್ಯ ಸಂಘಟನಾ ಸಂಚಾಲಕ, ಜಿಪಂ ಸದಸ್ಯ ಎ. ಮಾನಯ್ಯ ಮಾತನಾಡಿ, ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬೆಲೆ ನಿವಾಸಿಗಳಾದ ಡಾ| ಸಿದ್ಧಲಿಂಗಯ್ಯ ಅವರು ದಲಿತ ಮತ್ತು ಬಂಡಾಯ ಸಾಹಿತ್ಯದ ಮೂಲಕ ಇಡೀ ರಾಜ್ಯಕ್ಕೆ ಹೆಸರು ಮಾಡಿದ್ದರು.

ಅವರ ಬಂಡಾಯ ಸಾಹಿತ್ಯದಿಂದ ದಲಿತ ಲೋಕಕ್ಕೆ ಒಂದು ಹೊಸ ಚೈತನ್ಯ ಮತ್ತು ಹೊಸ ಹುರುಪು ತುಂಬಿದ್ದರು. ಡಾ| ಸಿದ್ದಲಿಂಗಯ್ಯ ಅವರ ಅಗಲಿಕೆಯಿಂದ ಇಡೀ ದಲಿತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಚ್‌. ಸಿದ್ದೇಶ್‌, ಪತ್ರಕರ್ತ ಕಾಡೂರು ಮಧುಸೂದನ್‌, ಮುಖಂಡರಾದ ಡಿ.ಸೂರಿ, ಆಂಜಿನೇಯ, ಕೆ.ಗಾದಿಲಿಂಗ, ಎಚ್‌. ರಮೇಶ್‌, ಟಿ.ಎಂ.ಎರ್ರಿಸ್ವಾಮಿ, ಶಂಕರ್‌, ಮಲ್ಲಯ್ಯ, ಭೀಮಾ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next