Advertisement

ಲಾಕ್‌ಡೌನ್‌ ಮುಂದುವರಿಕೆ ಒಳ್ಳೆಯದು: ಸಚಿವ ಸಿಂಗ್‌

09:00 PM Jun 01, 2021 | Team Udayavani |

ಬಳ್ಳಾರಿ: ಕೊರೊನಾ ಸೋಂಕಿನ ಪ್ರಮಾಣ ಕಡಿಮೆ ಮಾಡುವ ದೃಷ್ಟಿಯಿಂದ ಸದ್ಯದ ಸ್ಥಿತಿಯಲ್ಲಿ ತಜ್ಞರ ವರದಿ ಪಡೆದು ರಾಜ್ಯಾದ್ಯಂತ ಲಾಕ್‌ ಡೌನ್‌ ಮುಂದುವರಿಸಿದರೇ ಒಳ್ಳೆಯದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್‌ ತಿಳಿಸಿದರು.

Advertisement

ನಗರದ ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಲಾಕ್‌ ಡೌನ್‌ನಿಂದ ಬಹಳಷ್ಟು ಜನರಿಗೆ ತೊಂದರೆಯಾಗುತ್ತದೆ. ಆದರೂ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯವಾಗಿದೆ.

ಜೂನ್‌ 30ರ ವರೆಗೆ ಲಾಕ್‌ಡೌನ್‌ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಇಲ್ಲ. ಲಾಕ್‌ಡೌನ್‌ ಮಾಡೋದಾ, ಬೇಡವಾ ಎನ್ನುವುದನ್ನು ಈಗಲೇ ಹೇಳ್ಳೋಕೆ ಅಗಲ್ಲ. ತಜ್ಞರ ಸಮಿತಿ ನಿರ್ಣಯದ ಮೇಲೆ ಲಾಕ್‌ಡೌನ್‌ ಭವಿಷ್ಯ ನಿರ್ಧಾರವಾಗಲಿದೆ ಎಂದರು.

ವೈಯಕ್ತಿಕವಾಗಿ ಸದ್ಯಕ್ಕೆ ಲಾಕ್‌ಡೌನ್‌ ತೆರವು ಮಾಡಬಾರದು ಅನಿಸುತ್ತದೆ. ಏಕೆಂದರೆ ಸ್ವಲ್ಪ ಮೈಮರೆತರು ಅನಾಹುತ ಆಗುತ್ತದೆ. ಹೀಗಾಗಿ ಮುಂದುವರೆಸುವುದು ಒಳ್ಳೆಯದು. ಲಾಕ್‌ಡೌನ್‌ನಿಂದ ಕೆಲವರಿಗೆ ತೊಂದರೆ ಆಗುತ್ತದೆ. ಅಂತಹವರಿಗೆ ಮುಖ್ಯಮಂತ್ರಿಗಳು ಪರಿಹಾರದ ಪ್ಯಾಕೇಜ್‌ ನೀಡಲಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next