Advertisement

ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗ ನೀಡಿ

09:56 PM May 04, 2021 | Team Udayavani |

ಸಂಡೂರು: ತಾಲೂಕಿನ ಬಹಳಷ್ಟು ಗ್ರಾಮಗಳ ರೈತರು ಉದ್ಯೋಗದ ಆಸೆಗಾಗಿ ಕೃಷಿ ಜಮೀನನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಿಕೊಂಡು ಇತ್ತ ಉದ್ಯೋಗವೂ ಇಲ್ಲ, ಭೂಮಿಯು ಇಲ್ಲದಂಥ ದುಸ್ಥಿತಿ ಉಂಟಾಗಿದ್ದು ಜಿಂದಾಲ್‌ ಕಂಪನಿಯು ಉದ್ಯೋಗ ನೀಡುವ ಮೂಲಕ ಬೀದಿಪಾಲಾಗುತ್ತಿರುವ ರೈತ ಕುಟುಂಬಗಳನ್ನು ರಕ್ಷಿಸಬೇಕು ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ಅಧ್ಯಕ್ಷ ಯು. ತಿಪ್ಪೇಸ್ವಾಮಿ ಒತ್ತಾಯಿಸಿದರು.

Advertisement

ಅವರು ಪಟ್ಟಣದ ತಹಶೀಲ್ದಾರ್‌ ಕಚೇರಿಯ ಅಧಿ ಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿ, ತಾಲೂಕಿನ ತಾಳೂರು, ವಡ್ಡು, ತಾರಾನಗರ, ಇತರ ಸುತ್ತಲಿನ ಗ್ರಾಮಗಳ ರೈತರು ಜಿಂದಾಲ್‌ ಕಂಪನಿಯಲ್ಲಿ ಕುಟುಂಬದ ಸದಸ್ಯರಿಗೆ ಕೆಲಸ ಕೊಡುತ್ತೇವೆ ಎಂದು ಒಪ್ಪಿಕೊಂಡು ಭೂಮಿಯನ್ನು ಎಕರೆಗೆ 1.80 ಲಕ್ಷಕ್ಕೆ ಖರೀದಿಸಿಕೊಂಡು ತಮ್ಮ ಅಭಿವೃದ್ಧಿ ಮಾಡಿಕೊಂಡಿದ್ದಾರೆ.

ಆದರೆ ಈಗ ಮಾತ್ರ ಕೆಲಸ ನೀಡುತ್ತಿಲ್ಲ. ಇದರಿಂದ ಕೃಷಿ ಕುಟುಂಬ ಭೂಮಿಯನ್ನು ಕಳೆದುಕೊಂಡು ಕೆಲಸವಿಲ್ಲದೆ ಬೀದಿಪಾಲಾಗುತ್ತಿದ್ದಾರೆ. ಆದ್ದರಿಂದ ತಕ್ಷಣ ಈ ಕುಟುಂಬಗಳ ರಕ್ಷಣೆಯನ್ನು ಮಾಡುವುದರ ಜೊತೆಗೆ ಉದ್ಯೋಗ ಕೊಡಬೇಕು. ಭೂಮಿ ಕೊಡಿಸುವ ಸಂದರ್ಭದಲ್ಲಿ ಮಧ್ಯವರ್ತಿಗಳೇ ಲಕ್ಷಾಂತರ ಹಣ ಲಪಟಾಯಿಸಿರುವುದು

Advertisement

Udayavani is now on Telegram. Click here to join our channel and stay updated with the latest news.

Next