Advertisement

ಕೃಷಿ ರಂಗದ ಕಾರ್ಮಿಕರ ಕೂಲಿ ಹೆಚ್ಚಿಸಲು ಒತ್ತಾಯ

06:15 PM Apr 16, 2021 | Team Udayavani |

ಸಿರುಗುಪ್ಪ: ತಾಲೂಕಿನ 27 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿರುವವರಿಗೆ ಕೃಷಿ ರಂಗದ ಕಾರ್ಮಿಕರಿಗೆ ನೀಡುವ ವೇತನವನ್ನು ನೀಡಬೇಕು ಎಂದು ಒತ್ತಾಯಿಸಿ ತಾಲೂಕು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಪದಾ ಧಿಕಾರಿಗಳು ತಹಶೀಲ್ದಾರ್‌ ಕಚೇರಿ ಶಿರಸ್ತೆದಾರ್‌ ಬಾಬು ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

Advertisement

ಸಂಘದ ತಾಲೂಕು ಅದ್ಯಕ್ಷ ಇ.ಆರ್‌ .ಯಲ್ಲಪ್ಪ ಮಾತನಾಡಿ, ಕೃಷಿ ಸಂಬಂಧಿ  ತ ಕೆಲಸಗಳಲ್ಲಿ ತೊಡಗುವವರ ಕನಿಷ್ಠ ವೇತನವನ್ನು ಪರಿಷ್ಕರಿಸಿ 1-4-2020 ರಿಂದ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದು, ಈ ಆದೇಶದ ಪ್ರಕಾರ ಕೃಷಿ ರಂಗದಲ್ಲಿ ಕೆಲಸ ಮಾಡುತ್ತಿರುವ ಕೃಷಿ ಕಾರ್ಮಿಕರಿಗೆ 424.80 ರೂ. ಕನಿಷ್ಠ ವೇತನ ಜಾರಿಯಾಗಿರುತ್ತದೆ. ಈಗ ಕೇಂದ್ರ ಸರ್ಕಾರ ಗ್ರಾಮೀಣಾ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವವರ ಕನಿಷ್ಠ ದಿನಗೂಲಿಯನ್ನು ಪರಿಷ್ಕರಿಸುವ ಆದೇಶ ಹೊರಡಿಸಿದೆ. 15-03-2021ರಂದು ಹೊರಡಿಸಲಾದ ಈ ಆದೇಶದ ಪ್ರಕಾರ ಗ್ರಾಮೀಣ ಉದ್ಯೋಗ ಖಾತ್ರಿ ಕೆಲಸಗಾರರ ಕನಿಷ್ಠ ದಿನಗೂಲಿ ಕರ್ನಾಟಕದಲ್ಲಿ ಕೇವಲ 289 ರೂ. ಇರುತ್ತದೆ. ಆದರೆ ಈ ಎರಡು ಕೂಲಿ ದರಗಳ ನಡುವೆ ಗಣನೀಯವಾದ ವ್ಯತ್ಯಾಸವಿದ್ದು, ಇದು ಕಾನೂನಿಗೆ ವಿರುದ್ಧವಾಗಿದೆ. ಉದ್ಯೋಗ ಖಾತ್ರಿ ಕೆಲಸಗಾರರ ವೇತನವನ್ನು ಕೃಷಿ ಕಾರ್ಮಿಕರಿಗೆ ಅಕುಶಲ ಕೆಲಸಕ್ಕೆ ನೀಡುವ ಕನಿಷ್ಠ ದಿನಗೂಲಿಗಿಂತ ಕಡಿಮೆಯಾಗಿರಬಾರದು.

ಈ ನ್ಯೂನ್ಯತೆಯನ್ನು ಸರಿಪಡಿಸಿ ಕೃಷಿ ಕಾರ್ಮಿಕರಿಗೆ ನೀಡುವಷ್ಟು ಕೂಲಿಯನ್ನು ಉದ್ಯೋಗಖಾತ್ರಿ ಕೆಲಸಗಾರರಿಗೂ ನೀಡಬೇಕು ಎಂದು ಆಗ್ರಹಿಸಿದರು. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ, ಗ್ರಾಮೀಣ ಕೂಲಿಕಾರರಿಗೆ ಜೀವನ ದುಸ್ತರವಾಗಿದೆ. ಉದ್ಯೋಗ ಖಾತ್ರಿ ಯೋಜನೆಯ ಮೇಲೆ ಅವರ ಅವಲಂಬನೆ ಹೆಚ್ಚಾಗಿದೆ. ಆದ್ದರಿಂದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿ ದುಡಿಯುವವರ ಕನಿಷ್ಠ ದಿನಗೂಲಿಯನ್ನು 600 ರೂ.ಗಳಿಗೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು. ಪ್ರಧಾನ ಕಾರ್ಯದರ್ಶಿ ವಿ.ಗುರುಸ್ವಾಮಿ ಪದಾಧಿ ಕಾರಿಗಳಾದ ಎಚ್‌.ವಿ.ಲಕ್ಷ ¾ಣ, ಮಲ್ಲ, ಗಿರೀಶ, ತಿಮ್ಮಪ್ಪ, ಗಂಗಪ್ಪ, ಮಾರೆಮ್ಮ, ಈರಮ್ಮ, ದುರಗಮ್ಮ, ಅಂಬಮ್ಮ, ಮಾರುತಿ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next