Advertisement

ವಾಯು ಮಾಲಿನ್ಯ ತಡೆಗೆ ಒತ್ತಾಯಿಸಿ ಮನವಿ

05:46 PM Jan 25, 2021 | Team Udayavani |

ಬಳ್ಳಾರಿ: ಜಿಲ್ಲೆಯ ಸಂಡೂರು ಮತ್ತು ಕುರುಗೋಡು ತಾಲೂಕಿನ ಕುಡಿತಿನಿ ಸುತ್ತಮುತ್ತಲ ಪ್ರದೇಶಗಳಲ್ಲಿರುವ ಕೈಗಾರಿಕೆಗಳಿಂದ ಉಂಟಾಗುತ್ತಿರುವ ಜಲ, ವಾಯು ಮಾಲಿನ್ಯ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತೋರಣಗಲ್ಲು ಜನಪರ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ಅಪರ ಜಿಲ್ಲಾಧಿಕಾರಿ ಪಿ.ಎಸ್‌.ಮಂಜುನಾಥ್‌ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಜಿಲ್ಲೆಯ ಸಂಡೂರು, ಕುರುಗೋಡು ತಾಲೂಕಿನ ತೋರಣಗಲ್ಲು ಮತ್ತು ಕುಡತಿನಿ ಸುತ್ತಮುತ್ತಲು ಇರುವ ಕೈಗಾರಿಕೆಗಳಿಂದ ಹೊರಹೊಮ್ಮುವ ತ್ಯಾಜ್ಯ ಮತ್ತು ಧೂಳಿನ ಕಣಗಳಿಂದ ತೋರಣಗಲ್ಲು, ಸುಲ್ತಾನಪುರ ಗ್ರಾಮದ ಸುತ್ತಾಮುತ್ತ ಜಲ-ವಾಯು ವಿಷಪೂರಿತವಾಗಿವೆ. ದಿನದಿಂದ ದಿನಕ್ಕೆ ವಾಯು ಗುಣಮಟ್ಟದ ಸೂಚ್ಯಂಕ ಎಸ್‌ 1950 ಎಕ್ಯೂಎ ಹೆಚ್ಚಾಗಿದೆ. ನಾರಿಹಳ್ಳ ಮುಂತಾದ ನಾಲೆಗಳ ಮೂಲಕ ದರೋಜಿ ಕರೆಗೆ ವಿಷ ಪೂರಿತ ತ್ಯಾಜ್ಯ ಹರಿದು ಜಲ ಮಾಲಿನ್ಯವಾಗುತ್ತಿದೆ. ಕುಡಿತಿನಿ ಪಟ್ಟಣದಲ್ಲಿ ಧೂಳಿನಿಂದಾಗಿ ವಾಯು ಮತ್ತು ಕುಡಿಯುವ ನೀರಿನ ಮಾಲಿನ್ಯ ಉಂಟಾಗಿದೆ. ಪರಿಸರ ಮಾಲಿನ್ಯದ ಬಗ್ಗೆ ಕೈಗಾರಿಕೆಗಳ ಮೇಲೆ ಕಾನೂನು ರೀತಿ ಕೇಸು ದಾಖಲಿಸಿ ದಂಡ ವಿಧಿ ಸಿ, ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಆನ್‌ಲೈನ್‌ ಎಮಿಷನ್‌ ಮಾನಿಟರಿಂಗ್‌ ಸಿಸ್ಟಂನ್ನು ಪ್ರಮುಖ ಪರಿಸರ ಮಾಲಿನ್ಯ ಹಾಟ್‌ಸ್ಪಾಟ್‌ ಸ್ಥಳಗಳಲ್ಲಿ ಅಳವಡಿಸಬೇಕು. ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ ಎಂದು ಸಮಿತಿಯ ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಸುಲ್ತಾನಪುರ ಗ್ರಾಮವನ್ನು ಶೀಘ್ರ ಸ್ಥಳಾಂತರ ಮಾಡಬೇಕು. ಸ್ಥಳಾಂತರಗೊಳ್ಳುವರಿಗೆ ಹತ್ತಿರದ ಕೈಗಾರಿಕೆಗಳನ್ನು ಮುಚ್ಚಿಸಬೇಕು. ಕಲ್ಲಿದ್ದಲು ಬಳಸುವ ಕೈಗಾರಿಕೆಗಳು ಹೆಚ್ಚಾಗಿದ್ದು ಫಲವತ್ತಾದ ಮಣ್ಣು ಕೂಡ ಕಲುಷಿತಗೊಂಡು ಕೃಷಿ ಉತ್ಪಾದನೆ ಕುಂಠಿತಗೊಂಡಿದೆ. ಕೃಷಿಗೆ ಪರಿಹಾರ ನೀಡಬೇಕು. ಉತ್ತಮ ತಂತ್ರಜ್ಞಾನವನ್ನು ಬಳಿಸಿ ಗಾಳಿಯಿಂದ ಧೂಳಿನ ಕಣ ತಡೆಗಟ್ಟಲು ಕ್ರಮಕೈಗೊಳ್ಳಬೇಕು ಎಂದವರು ಕೋರಿದ್ದಾರೆ. ಈ ಸಂದರ್ಭದಲ್ಲಿ ಸಮಿತಿ ಮುಖಂಡರುಗಳಾದ ಕೆ.ಜಂಬಯ್ಯ, ಜಂಗ್ಲಿ ಸಾಬ್‌, ಜೆ.ಎಂ. ಚೆನ್ನಬಸಯ್ಯ ಮೊದಲಾದವರು ಇದ್ದರು.

ಓದಿ: ಕ್ರಿಕೆಟ್‌; ಬೆಳಗಾವಿ ತಂಡಕ್ಕೆ ಪ್ರಶಸ್ತಿ

Advertisement

Udayavani is now on Telegram. Click here to join our channel and stay updated with the latest news.

Next