Advertisement

Ballari: ನಾಲ್ವರು ರೈತರಿಂದ ವಿಷಸೇವಿಸಿ ಆತ್ಮಹತ್ಯೆ ಯತ್ನ

11:17 PM Jun 30, 2024 | Team Udayavani |

ಬಳ್ಳಾರಿ:ಕಂಪನಿಯೊಂದು ಮೆಣಸಿನಕಾಯಿ ಹಣ ನೀಡದ ಕಾರಣ ನೊಂದ ನಾಲ್ವರು ರೈತರು ಏಕಕಾಲದಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮ ಸಮುದ್ರ ಗ್ರಾಮದಲ್ಲಿ ಭಾನುವಾರ ನಡೆದಿದೆ.

Advertisement

ಸೋಮಸಮುದ್ರ ಗ್ರಾಮದ ಹನುಮಂತ, ರುದ್ರೇಶ್, ಕೊಣೀರ ಮತ್ತು ಶೇಖರ್ ಎನ್ನುವವರು ವಿಷ ಕುಡಿದು ಆತ್ಮಹತ್ಯೆ ಯತ್ನಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಒಂದುವರೆ ವರ್ಷದ ಹಿಂದೆ ಸೋಮಸಮುದ್ರ ಗ್ರಾಮದವರು ರಾಮರೆಡ್ಡಿ, ಸುದರ್ಶನ ಮತ್ತು ವಿರೂಪಾಕ್ಷ ಎನ್ನುವ ಎಜೆಂಟರ ಮೂಲಕ ಅಗ್ರಗೇಡ್ ಕಂಪನಿಗೆ ಮೆಣಸಿನಕಾಯಿ ಮಾರಾಟ ಮಾಡಿದ್ದರು.ಸೋಮಸಮುದ್ರ ಗ್ರಾಮದ 65 ರೈತರ 1.93 ಕೋಟಿ ರೂ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಹಲವು ಬಾರಿ ಹಣ ಕೇಳಿದರೂ ಕೊಡದಿದ್ದಾಗ ಬೇಸತ್ತು ನಾಲ್ವರು ಆತ್ಮ ಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next