Advertisement

ಮೊದಲರ್ಧ ಶೂಟಿಂಗ್‌ ನಡೆಸಿದ ಬಲಿಪೆ 

04:06 PM May 31, 2018 | |

ವಿಭಿನ್ನ ಕಥೆ ಹಾಗೂ ಆಯಾಮದ ಮೂಲಕ ಕೋಸ್ಟಲ್‌ ವುಡ್‌ನ‌ಲ್ಲಿ ಸಿನೆಮಾಗಳು ತಯಾರಾಗುತ್ತಲೇ ಇವೆ. ಇದರಂತೆ, ‘ಬಲಿಪೆ’ ಎಂಬ ಟೈಟಲ್‌ನಲ್ಲಿ ಹೊಸ ಸಿನೆಮಾವೊಂದು ಸೆಟ್ಟೇರಲು ಸಿದ್ಧವಾಗಿದೆ. ಈಗಾಗಲೇ ಶೂಟಿಂಗ್‌ ಕೂಡ ಆರಂಭಿಸಿರುವ ಬಲಿಪೆಯಲ್ಲಿ ಯಾರಿದ್ದಾರೆ? ಯಾವ ರೀತಿಯ ಕಥೆ? ಸಹಿ ತ ಹಲವು ವಿಚಾರಗಳು ಇನ್ನಷ್ಟೇ ತಿಳಿಯಬೇಕಿದೆ. ಅಂದ ಹಾಗೆ ಹೇಮಂತ್‌ ಸುವರ್ಣ ನಿರ್ಮಾಣದ ಈ ಸಿನೆಮಾದ ರಚನೆ ಹಾಗೂ ನಿರ್ದೆಶನವನ್ನು ಪ್ರಸಾದ್‌ ಆಳ್ವ ಮಾಡಿದ್ದಾರೆ.

Advertisement

ಅಭಿಷೇಕ್‌ ಅರ್ಕುಳ ಸಹ ನಿರ್ದೆಶನದ ಈ ಸಿನೆಮಾಕ್ಕೆ ರಕ್ಷಿತ್‌ ಚಿನ್ನು ಛಾಯಾಗ್ರಹಣ ಮಾಡಿದ್ದಾರೆ. ಎಂಡೋಸಲ್ಫಾನ್‌ ಪೀಡಿತ ಪ್ರದೇಶವನ್ನು ಈ ಸಿನೆಮಾದಲ್ಲಿ ಪ್ರತಿಬಿಂಬಿಸುವ ಪ್ರಯತ್ನ ನಡೆಸಲಾಗಿದೆ. ಚಿರತೆಯನ್ನು ತುಳುವಿನಲ್ಲಿ ‘ಬಲಿಪೆ’ ಎಂದು ಕರೆಯುವ ಕಾರಣದಿಂದ ಬಲಿಷ್ಠ ಎಂಬ ರೀತಿಯಲ್ಲಿ ಸಿನೆಮಾ ಸಿದ್ಧಪಡಿಸಲಾಗಿದೆ. ಮೊದಲರ್ಧ ಶೂಟಿಂಗ್‌ ಮುಗಿಸಿದ ಈ ಸಿನೆಮಾ ಶೀಘ್ರದಲ್ಲಿ ಎರಡನೇ ಹಂತದ ಶೂಟಿಂಗ್‌ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next