Advertisement

ಬಾಳೆಹೊನ್ನೂರಲ್ಲೂ ಭಾರೀ ಮಳೆ: ಭದ್ರೆ ನೀರಿನ ಮಟ್ಟ ಹೆಚ್ಚಳ

07:49 PM Sep 09, 2019 | Naveen |

ಬಾಳೆಹೊನ್ನೂರು: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭದ್ರಾ ನದಿಯಲ್ಲಿ ನೀರಿನ ಮಟ್ಟ ಹಂತಹಂತವಾಗಿ ಏರುತ್ತಿದೆ.

Advertisement

ಕಳಸ, ಹೊರನಾಡು, ಕುದುರೆಮುಖ, ಬಾಳೆಹೊಳೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಮಳೆಯಿಂದಾಗಿ ನಾಟಿ ಮಾಡಿದ ಗದ್ದೆಯಲ್ಲಿ ಭತ್ತದ ಸಸಿ ಕೊಳೆತು ಹೋಗುತ್ತಿದ್ದು, ಏಡಿಗಳ ಕಾಟ ಹೆಚ್ಚಾಗಿದೆ.

ಕೊಳೆ ರೋಗದಿಂದ ಅಡಕೆ ಮಿಡಿ ಉದುರುತ್ತಿದ್ದರೆ, ಮತ್ತೂಂದೆಡೆ ಮಂಗಗಳು ಅಳಿದುಳಿದ ಅಡಕೆ ಮಿಡಿಗಳನ್ನು ಕಿತ್ತು ಹಾಕುತ್ತಿರುವುದರಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ. ಕಾಫಿ ತೋಟದಲ್ಲಿ ನೀರು ನಿಂತ ಹಿನ್ನೆಲೆಯಲ್ಲಿ ಕಾಫಿ ಕಾಯಿಗಳು ಉದುರಲು ಪ್ರಾರಂಭವಾಗಿವೆ. ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ನಷ್ಟ ಸಂಭವಿಸಿರುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next