Advertisement

ಪೂಂಛ್ ನಲ್ಲೇ ಬಾಲಾಕೋಟ್‌ ಹುಡುಕಿದ ಅಪ್ರತಿಮರು

12:30 AM Mar 03, 2019 | |

ಭಾರತದ ಪೂಂಛ್ ನಲ್ಲಿರುವ ಬಾಲಾಕೋಟ್‌ನಲ್ಲೇ ದಾಳಿ ನಡೆಸಲಾಗಿದೆ ಎಂದು ಕೆಲವರು ವಾಸ್ತವವನ್ನು ಪರಿಶೀಲಿಸದೆಯೇ ವರದಿ ಮಾಡಿದ್ದನ್ನು ವಿತ್ತ ಸಚಿವ ಅರುಣ್‌ ಜೇಟ್ಲಿ ಟೀಕಿಸಿದ್ದಾರೆ. ನಾವು ಯಾಕೆ ನಮ್ಮದೇ ದೇಶದ ಪ್ರದೇಶದ ಮೇಲೆ ದಾಳಿ ನಡೆಸಬೇಕು? ಕೆಲವು ಸುದ್ದಿ ವಾಹಿನಿಗಳು ವರದಿ ಮಾಡುವ ಬದಲಿಗೆ, ತಮ್ಮ ಅಜೆಂಡಾವನ್ನೇ ಪ್ರದರ್ಶಿಸುತ್ತಿವೆ. ಪಾಕಿಸ್ಥಾನದ ಖೈಬರ್‌ ಪಖು¤ಂಕ್ವಾಗೆ ನಮ್ಮ ವಾಯುಪಡೆಯ ಯುದ್ಧ ವಿಮಾನಗಳು ತೆರಳಿದ್ದರೆ, ಸರಿಯಾದ ಮಾಹಿತಿ ಪಡೆಯದೇ ಎಲ್‌ಒಸಿ ಸಮೀಪವೇ ಇರುವ ಬಾಲಾಕೋಟ್‌ ಮೇಲೆ ದಾಳಿ ನಡೆಸಲಾಗಿದೆ ಎಂದು ಹುಯಿಲೆಬ್ಬಿಸಿದ್ದರು ಎಂದಿದ್ದಾರೆ. ಪ್ರಧಾನಿ ಮೋದಿಯವರ ಬಾನುಲಿ ಕಾರ್ಯಕ್ರಮವಾದ ಮನ್‌ ಕಿ ಬಾತ್‌ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತಾಡಿದರು.  ಸುದ್ದಿ ವಾಹಿನಿಗಳು ತಮ್ಮ ಅಜೆಂಡಾವನ್ನೇ ಪ್ರಸಾರ ಮಾಡುತ್ತಿವೆ ಎಂದೂ ಅವರು ಇದೇ ವೇಳೆ ಬೇಸರಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next