Advertisement

ಜ್ಞಾನವಾಪಿ ವಿವಾದ: ಶಿವಲಿಂಗದ ಕುರಿತು ಅವಹೇಳನಕಾರಿ ಪೋಸ್ಟ್; ಪ್ರೊಫೆಸರ್ ಗೆ ಬೇಲ್

05:47 PM May 21, 2022 | Team Udayavani |

ನವದೆಹಲಿ: ವಾರಾಣಸಿಯ ಜ್ಞಾನವಾಪಿ ಮಸೀದಿ ಆವರಣದೊಳಗೆ ಪತ್ತೆಯಾದ ಶಿವಲಿಂಗದ ಕುರಿತು ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಆರೋಪದಡಿ ಬಂಧಿಸಲ್ಪಟ್ಟಿದ್ದ ದೆಹಲಿ ಯೂನಿರ್ವಸಿಟಿಯ ಹಿಂದೂ ಕಾಲೇಜಿನ ಇತಿಹಾಸದ ಪ್ರೊಫೆಸರ್ ರತನ್ ಲಾಲ್ ಗೆ ದೆಹಲಿ ಕೋರ್ಟ್ ಶನಿವಾರ (ಮೇ 21) ಜಾಮೀನು ಮಂಜೂರು ಮಾಡಿರುವುದಾಗಿ ವರದಿ ತಿಳಿಸಿದೆ.

Advertisement

50,000 ಸಾವಿರ ಮೊತ್ತದ ವೈಯಕ್ತಿಕ ಬಾಂಡ್ ನೀಡಿದ ನಂತರ ಪ್ರೊಫೆಸರ್ ರತನ್ ಲಾಲ್ ಜೈಲಿನಿಂದ ಬಿಡುಗಡೆಗೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.

ಜ್ಞಾನವಾಪಿ ಮಸೀದಿ ಆವರಣದೊಳಗೆ ಪತ್ತೆಯಾಗಿರುವ ಶಿವಲಿಂಗದ ಬಗ್ಗೆ ಪ್ರೊಫೆಸರ್ ರತನ್ ಲಾಲ್ ಅವಹೇಳನಕಾರಿ ಕಮೆಂಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇಂದು (ಮೇ 21) ತೀಸ್ ಹಜಾರಿ ಕೋರ್ಟ್ ನ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಿದ್ದಾರ್ಥ ಮಲಿಕ್ ಅವರ ಮುಂದೆ ಹಾಜರುಪಡಿಸಲಾಗಿತ್ತು.

“ತನಗೆ ಪ್ರಕರಣದಲ್ಲಿ ಜಾಮೀನು ನೀಡಬೇಕು ಮತ್ತು ರಕ್ಷಣೆ ಕೋರಿ ಪ್ರೊಫೆಸರ್ ಲಾಲ್ ದೆಹಲಿ ಕೋರ್ಟ್ ಮೆಟ್ಟಿಲೇರಿದ್ದರು. “ನಾವು ಜಾಮೀನು ಅರ್ಜಿಯನ್ನು ಪರಿಗಣಿಸಿದ್ದೇವೆ. ಅವರೇನು ಕ್ರಿಮಿನಲ್ ಅಲ್ಲ, ಇಲ್ಲಿಂದ ಓಡಿಹೋಗಲ್ಲ. ದೂರಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನೀವು (ಪೊಲೀಸರು) ಯಾವುದೇ ಅವಕಾಶ ನೀಡಿಲ್ಲ “ ಎಂದು ಪ್ರೊಫೆಸರ್ ಪರ ವಕೀಲರು ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next