Advertisement

ಕೋಡಿ ಬಿದ್ದ ಕೆರೆಗೆ ಶಾಸಕ ಗೌರಿಶಂಕರ್‌ ಬಾಗಿನ

04:16 PM May 21, 2022 | Team Udayavani |

ತುಮಕೂರು: ಗ್ರಾಮಾಂತರ ಕ್ಷೇತ್ರದ ಮಸ್ಕಲ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರ ಅಮಾನಿಕೆರೆಯು ವರುಣನ ಕೃಪೆಯಿಂದ ಒಂದು ವರ್ಷದಲ್ಲಿ ಎರಡು ಬಾರಿ ಕೋಡಿ ಬಿದ್ದಿದ್ದು, ಕೆರೆಗೆ ಗ್ರಾಮಾಂತರಶಾಸಕ ಡಿ.ಸಿ.ಗೌರಿಶಂಕರ್‌ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.

Advertisement

ಸಾಸಲು ಕೆರೆಯು 22 ವರ್ಷಗಳ ನಂತರ ತುಂಬಿ ಕೋಡಿ ಹರಿದಿದ್ದು,ಗ್ರಾಮಾಂತರ ಶಾಸಕ ಗೌರಿ ಶಂಕರ್‌ ಮತ್ತು ಪಾಲ ನೇತ್ರಯ, ಇವರಿಬ್ಬರ ಅಧ್ಯಕ್ಷತೆ ಯಲ್ಲಿ, ಸಾವಿರಾರು ಗ್ರಾಮಸ್ಥರು ಹಾಗೂ ಮಹಿಳೆಯರ ಜೊತೆಯಲ್ಲಿ ಶುಕ್ರವಾರ ಗಂಗಾಪೂಜೆ ನೆರವೇರಿಸಿದರು.

ಗಂಗಾ ಪೂಜೆಯಲ್ಲಿ ನೆರೆದಿದ್ದ 1500ಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಹಿಂದೂ ಸಂಪ್ರದಾಯ ದಂತೆ ಶಾಸಕ ಡಿ.ಸಿ.ಗೌರಿಶಂಕರ್‌ ಹಾಗೂ ಪಾಲನೇತ್ರಯ ಅವರು ಇಬ್ಬರು ಕೂಡಿ ಅರಿಶಿಣ ಕುಂಕುಮ ಸೀರೆ ಕೊಡುವ ಮುಖಾಂತರ ಹೆಣ್ಣು ಮಕ್ಕಳಿಗೂ ಕೂಡ ಭಕ್ತಿ ಸಮರ್ಪಿಸಿದರು. ಗಂಗಾಪೂಜೆ, ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರಿಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಗ್ರಾಮಾಂತರ ಕ್ಷೇತ್ರದ ಜೆಡಿಎಸ್‌ ಮುಖಂಡರಾದ ರಾಮಚಂದ್ರಯ್ಯ, ತಾ. ಅಧ್ಯಕ್ಷರು, ಗೋವಿಂದರಾಜು, ಹಾಲನೂರು ಅನಂತ ಕುಮಾರ್‌, ಮಸ್ಕಲ್‌ ಕುಮಾರ್‌, ಮಸ್ಕಲ್‌ ಮೋಹನ್‌, ಸಿದ್ದಪ್ಪ, ಅಶ್ವತ್ಥ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next