Advertisement
ಗ್ರಾಮದ ವಿಶ್ವ ಪ್ರಸಿದ್ಧ ದ್ವಾರಸಮುದ್ರ ಕೆರೆಗೆ ಶುಕ್ರವಾರ ರೈತಸಂಘ, ಆಟೋ ಮಾಲಿಕರು ಮತ್ತು ಚಾಲಕರ ಬಳಗ, ಕೆರೆ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಬಾಗಿನ ಅರ್ಪಿಸಿ ಮಾತನಾಡಿ, ನೀರಾವರಿ ಹೋರಾಟಕ್ಕೆ ವಿವಿಧ ಮಠಾಧೀಶರು, ಜನಸಾಮಾನ್ಯರಿಂದ ದೊರೆತ ಅಭೂತ ಪೂರ್ವ ಬೆಂಬಲ ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
Related Articles
Advertisement
ಹೋರಾಟ ಅನಿವಾರ್ಯ: ಪುಷ್ಪಗಿರಿ ಮಠದ ಕಾರ್ಯದರ್ಶಿ ಎಸ್.ಎಚ್.ರಾಜಶೇಖರ್ ಮಾತನಾಡಿ, ದ್ವಾರಸಮುದ್ರ ಕೆರೆ ಭರ್ತಿಆಗಿರುವುದಕ್ಕೆ ಹೆಚ್ಚಿನ ಸಂತೋಷ ಪಡಬೇಕಿಲ್ಲ. ರಣಘಟ್ಟ ಶಾಶ್ವತ ನೀರಾವರಿ ಯೋಜನೆ ಜಾರಿ ಆಗುವವರೆಗೂ ಹೋರಾಟದ ಅನಿರ್ವಾತೆ ಇದೆ ಎಂದು ತಿಳಿಸಿದರು.
ಮುಂಗಾರು ಮತ್ತು ಹಿಂಗಾರು ಮಳೆ ಸಮೃದ್ಧಿ ಆಗಿ ಆಗಿರುವುದರಿಂದ ಇತಿಹಾಸಪ್ರಸಿದ್ಧ ದ್ವಾರಸಮುದ್ರ ಕೆರೆಗೆ ಸಾಕಷ್ಟು ನೀರುಹರಿದುಬಂದು, ಭರ್ತಿಯಾಗಿ ಕೋಡಿ ಹರಿದಿದೆ. ದಶಕಗಳಿಂದ ಈ ಭಾಗದ ರೈತರುಅನುಭವಿಸುತ್ತಿದ್ದ ಯಾತನೆ ನಿಲ್ಲಬೇಕಾದರೆ, ರಣಘಟ್ಟ ರಾಜ ಕಾಲುವೆ ಮೂಲಕ ದ್ವಾರಸಮುದ್ರ ಕೆರೆಗೆ ನೀರು ಹರಿಯಬೇಕಿದೆ ಎಂದು ಹೇಳಿದರು.
ಶಾಶ್ವತ ನೀರಾವರಿ ಯೋಜನೆ ಜಾರಿ ಆಗಲಿ: ಈ ಭಾಗಕ್ಕೆ ಶಾಶ್ವತ ನೀರಾವರಿ ದೊರೆತಂತಾಗಿದೆ. ದ್ವಾರಸಮುದ್ರಕೆರೆ ಭರ್ತಿ ಯಾಗಿರುವುದರಿಂದ ತಾತ್ಕಾಲಿಕ ಖುಷಿ ದೊರೆತಿದೆ. ಹಳೇಬೀಡು, ಮಾದಿಹಳ್ಳಿ ಹೋಬಳಿಯ ಸುತ್ತಮುತ್ತಲಿನ ನೂರಾರು ಹಳ್ಳಿಗಳ ರೈತರು ಸಮೃದ್ಧಿಯಾಗಿ ಜೀವನ ಸಾಗಿಸುತ್ತಾರೆ. ಆದರೆ, ಮಳೆ ಕೈಕೊಟ್ಟರೆ ಬದುಕು ಮೂರಾಬಟ್ಟೆಯಾಗುತ್ತದೆ. ಆದ್ದ ರಿಂದ ಶಾಶ್ವತ ಯೋಜನೆ ಜಾರಿಯಾದರೆ ರೈತರು ಮತ್ತು ಈ ಭಾಗದ ಜನಸಾಮಾನ್ಯರಿಗೆ ನೆಮ್ಮದಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೋಳಗುಂದ ಮಠದ ಜಯಚಂದ್ರಶೇಖರ ಸ್ವಾಮೀಜಿ, ಯಳನಾಡು ಮಠದ ಜ್ಞಾನಪ್ರಭು ದೇಶಕೇಂದ್ರ ಸ್ವಾಮೀಜಿ, ಮಡಾಳು ಮಠ ರುದ್ರಮುನಿ ಸ್ವಾಮೀಜಿಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ರೈತಸಂಘದಮುಖಂಡಾರಮಲ್ಲಿಕಾರ್ಜುನ್, ಹಾಲಪ್ಪ, ಶಿವಕುಮಾರ್, ಗುರುಶಾಂತಪ್ಪ, ಬಸವರಾಜು, ಗಂಗೂರು ಶಿವಕುಮಾರ್, ಕಾಂತರಾಜು, ತುಕರಾಂ, ರಘನಾಥ್ ಮುಂತಾದವರು ಹಾಜರಿದ್ದರು