Advertisement

Bagalkote; ಸಚಿವರ ತೋಟಕ್ಕೂ ಬಂತು ಘಟಪ್ರಭಾ ನದಿ ಪ್ರವಾಹ

11:47 AM Jul 28, 2024 | Team Udayavani |

ಬಾಗಲಕೋಟೆ: ಘಟಪ್ರಭಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೂ ಪ್ರವಾಹದ ಬಿಸಿ ತಟ್ಟಿದೆ.

Advertisement

ಸಚಿವ ಆರ್.ಬಿ. ತಿಮ್ಮಾಪುರ ಅವರ ಸ್ವಗ್ರಾಮ, ಮುಧೋಳ ತಾಲೂಕಿನ ಉತ್ತೂರಿನಲ್ಲಿ ಮನೆ,‌ ತೋಟ ಹೊಂದಿದ್ದು, ಅವರ ತೋಟಕ್ಕೂ‌ ಘಟಪ್ರಭಾ ನದಿ‌ ನೀರು ಆವರಿಸಿದೆ.

ತೋಟದಲ್ಲಿ ಬೆಳೆದ ಕಬ್ಬು ಸಹಿತ ವಿವಿಧ ಬೆಳೆಗಳು ನೀರಿನಲ್ಲಿ ನಿಂತಿದ್ದು, ಸಚಿವ ತಿಮ್ಮಾಪುರ‌ ಅವರು ಸಹೋದರನ‌ ಜತೆಗೆ ತೋಟಕ್ಕೆ ತೆರಳಿ ವೀಕ್ಷಿಸಿದರು.

ಸಚಿವರ ತೋಟದ ಸುತ್ತಮುತ್ತಲಿನ ತೋಟಗಳಿಗೂ ನೀರು‌ ನುಗ್ಗಿದ್ದು, ರೈತರ‌ ಹೊಲಗಳನ್ನೂ ಪರಿಶೀಲಿಸಿದರು.‌ ಪ್ರವಾಹದಿಂದ ‌ಆದ ಬೆಳೆ ಹಾನಿಯ‌ ಕುರಿತು ಸಮೀಕ್ಷೆ ನಡೆಸಲು‌ ಅಧಿಕಾರಿಗಳಿಗೆ‌ ಇದೇ ವೇಳೆ ಸೂಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next