Advertisement

ಕ್ಲಸ್ಟರ್ ಮಟ್ಟದ ಶಾಲೆ ಕ್ರೀಡಾಕೂಟದಲ್ಲಿ ಗಲಾಟೆ : ಕಲ್ಲು ತೂರಾಟ, ಹಲವರಿಗೆ ಗಾಯ

03:33 PM Jul 23, 2022 | Team Udayavani |

ಬಾಗಲಕೋಟೆ: ಎರಡು ಗ್ರಾಮದ ಯುವಕರ ನಡುವೆ ಗಲಾಟೆ ನಡೆದು ಕಲ್ಲು ತೂರಾಟ ಮಾಡಿ ಹಲವರಿಗೆ ಗಾಯಗೊಂಡಿರುವ ಘಟನೆ ಬಾದಾಮಿ ತಾಲೂಕಿನ ರಡ್ಡೇರ ತಿಮ್ಮಾಪೂರ ಗ್ರಾಮದಲ್ಲಿ ನಡೆದಿದೆ.

Advertisement

ಕಲ್ಲು ತೂರಾಟದಲ್ಲಿ ಇಬ್ಬರ ತಲೆಗೆ ಗಾಯವಾಗಿದ್ದು, ಬಾದಾಮಿ ತಾಲೂಕಿನ ರಡ್ಡೇರ ತಿಮ್ಮಾಪೂರ ಗ್ರಾಮದ ಗುರುದೇವ ಆತ್ಮಾನಂದ ಪ್ರೌಢಶಾಲೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಗಲಾಟೆ ನಡೆದಿದೆ.

ಚಿಂಚಲಕಟ್ಟಿ, ನೀರಲಕೇರಿ ಗ್ರಾಮದ ಯುವಕರ ನಡುವೆ ನೆಡೆದ ಗಲಾಟೆಯಲ್ಲಿ ಕಲ್ಲು ತೂರಾಟದಲ್ಲಿ ಹಲವು ಶಾಲೆ ಮಕ್ಕಳಿಗೂ ಗಾಯವಾಗಿದೆ ಎನ್ನಲಾಗಿದೆ.

ಕಲ್ಲು ತುರಾಟದಲ್ಲಿ ನೀರಲಕೇರಿ ಗ್ರಾಮದ ಸಿದ್ದಪ್ಪ ಬೀರನೂರ ರವಿ ನಾಯ್ಕರಗೆ ತಲೆಗೆ ಗಾಯವಾಗಿದೆ.

ಸ್ಥಳಕ್ಕೆ ಬಾದಾಮಿ ಸಿಪಿಐ ಕರಿಯಪ್ಪ ಬನ್ನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next