Advertisement

ಕುಂದಾಪುರಕ್ಕೆ ತೆರಳಿ ಮಾಹಿತಿ ಕಲೆಹಾಕಿದ ಬದಿಯಡ್ಕ ಪೊಲೀಸ್‌

12:50 AM Nov 24, 2022 | Team Udayavani |

ಬದಿಯಡ್ಕ: ಬದಿಯಡ್ಕದ ಹಿರಿಯ ದಂತ ವೈದ್ಯ ಡಾ| ಕೃಷ್ಣಮೂರ್ತಿ ಸರ್ಪಂಗಳ (57) ಅವರ ನಿಗೂಢ ಸಾವಿನ ಕುರಿತು ತನಿಖೆಯ ಅಂಗವಾಗಿ ಕುಂದಾಪುರಕ್ಕೆ ತೆರಳಿದ್ದ ಬದಿಯಡ್ಕ ಪೊಲೀಸರು ಅಲ್ಲಿನ ಸಿಸಿ ಕೆಮರಾ ದೃಶ್ಯಗಳನ್ನು ಸಂಗ್ರಹಿಸಲು ಕ್ರಮ ಕೈಗೊಂಡಿದ್ದಾರೆ.

Advertisement

ಡಾ| ಕೃಷ್ಣಮೂರ್ತಿ ಅವರು ಕುಂದಾಪುರಕ್ಕೆ ತಲುಪಿದ ಬಳಿಕ ಬಟ್ಟೆಬರೆ ಬದಲಾಯಿಸಿ ನಡೆದು ಹೋಗುತ್ತಿರುವ ದೃಶ್ಯಗಳು ಅಲ್ಲಿನ ಸಿಸಿ ಕೆಮರಾದಲ್ಲಿ ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಬದಿಯಡ್ಕ ಪೊಲೀಸರು ಕುಂದಾಪುರಕ್ಕೆ ತೆರಳಿ ಮಾಹಿತಿ ಸಂಗ್ರಹಕ್ಕೆ ತೊಡಗಿದ್ದಾರೆ.

ನ. 8ರಂದು ಡಾ| ಕೃಷ್ಣಮೂರ್ತಿ ಬದಿಯಡ್ಕ ದಿಂದ ನಾಪತ್ತೆಯಾಗಿದ್ದರು. ನ. 9ರಂದು ಅವರ ಮೃತದೇಹ ಕುಂದಾಪುರ ಸಮೀಪದ ರೈಲು ಹಳಿಯಲ್ಲಿ ಪತ್ತೆಯಾಗಿತ್ತು. ಸಾವಿನಲ್ಲಿ ನಿಗೂಢತೆ ಇರುವುದಾಗಿ ಸಂಬಂಧಿಕರು ಆರೋಪಿ ಸಿದ್ದರು. ಈ ಹಿನ್ನೆಲೆಯಲ್ಲಿ ಬದಿಯಡ್ಕ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿ ದ್ದಾರೆ. ಕುಂದಾಪುರದ ಪೊಲೀಸರು ಕೆಲವು ದಿನಗಳ ಹಿಂದೆ ಬದಿಯಡ್ಕಕ್ಕೆ ಬಂದು ಮಾಹಿತಿ ಸಂಗ್ರಹಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next