Advertisement

Tragedy: ಮೊಬೈಲ್ ಬಿಡು ಅಂದಿದ್ದಕ್ಕೆ ವಿವಾಹಿತ ಯುವತಿ ನೇಣು ಬಿಗಿದು ಆತ್ಮಹತ್ಯೆ

11:01 AM Mar 07, 2024 | Team Udayavani |

ಬಾದಾಮಿ : ನಿತ್ಯ‌ ಮೊಬೈಲ್ ನಲ್ಲೇ ಕಾಲ ಕಳೆಯುತ್ತಿದ್ದ ಮಹಿಳೆಗೆ ಹೆತ್ತವರು ಬುದ್ದಿ ಹೇಳಿದ್ದನ್ನೆ ಮಾನಸಿಕ ಮಾಡಿಕೊಂಡ ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬಾದಾಮಿ ರೈಲ್ವೆ ಸ್ಟೇಶನ್ ಏರಿಯಾದ‌ ಮನೆಯಲ್ಲಿ ಸಂಭವಿಸಿದೆ.

Advertisement

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ವಿದ್ಯಾ ಹನಮಂತ ದೊಡಮನಿ (28) ಎಂದು ಗುರುತಿಸಲಾಗಿದೆ.

ವಿದ್ಯಾ ನಿತ್ಯ ಮೊಬೈಲ್ ನಲ್ಲಿ ಕಾಲ ಕಳೆಯುತ್ತಿದ್ದಳು. ಮನೆಯ ಕೆಲಸ‌ ಮಾಡದೇ ಮೊಬೈಲ್ ನೋಡುತ್ತ, ಹಾಡು ಕೇಳುತ್ತ ಕಾಲ ಕಳೆಯುತ್ತಿದ್ದಳು. ಹಾಗೆಲ್ಲ ಮಾಡಬೇಡ, ಮೊಬೈಲ್ ಬಿಟ್ಟು ಮನೆ ಕೆಲಸ ಮಾಡು ಎಂದು ಬುದ್ದಿಮಾತು ಹೇಳಿದ್ದರು. ಅದನ್ನೆ ಮಾನಸಿಕವಾಗಿ ತೆಗೆದುಕೊಂಡು ಮನೆಯಲ್ಲಿ ನೇಣು ಹಾಕಿಕೊಂಡಿದ್ದಳು. ಕೂಡಲೇ ಅವಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗಮಧ್ಯೆ ಅಸುನೀಗಿದ್ದಾಳೆ.

ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Summons ನಿಂದ ಪರಾಗಬೇಕಾದರೆ ಆ ಪಕ್ಷ ಸೇರಬೇಕು… ಕಿಡಿಕಾರಿದ ಕೇಜ್ರಿವಾಲ್

Advertisement
Advertisement

Udayavani is now on Telegram. Click here to join our channel and stay updated with the latest news.

Next