Advertisement

ಜ||ಬಿಪಿನ್‌ ರಾವತ್‌ ಸಾವಿಗೆ ಕಾರಣವೇನು?

12:49 AM Jan 03, 2022 | Team Udayavani |

ಹೊಸದಿಲ್ಲಿ: ರಕ್ಷಣಾ ಪಡೆಗಳ ಮುಖ್ಯಸ್ಥ ದಿ|ಜ|ಬಿಪಿನ್‌ ರಾವತ್‌ ಸೇರಿ 14 ಮಂದಿಯ ಸಾವಿಗೆ ಕಾರಣವಾದ ಅಂಶದ ಬಗ್ಗೆ ತನಿಖೆ ನಡೆಸಿದ ಸಮಿತಿ ಶೀಘ್ರದಲ್ಲಿಯೇ ಐಎಎಫ್ ಮುಖ್ಯಸ್ಥರಿಗೆ ವರದಿ ಸಲ್ಲಿಸಲಿದೆ.

Advertisement

ದುರಂತಕ್ಕೆ ಪೈಲಟ್‌ ವೈಫ‌ಲ್ಯ ಅಥವಾ ತಾಂತ್ರಿಕ ವೈಫ‌ಲ್ಯ ಕಾರಣ ಅಲ್ಲ ಎಂದು ಮೂಲಗಳು ಹೇಳಿವೆ. ಜ| ರಾವತ್‌ ಮತ್ತು ಇತರರು ಪ್ರಯಾಣಿಸುವ ಮೊದಲು ಹೆಲಿಕಾಪ್ಟರ್‌ನ್ನು ತಾಂತ್ರಿಕವಾಗಿ ಪರಿಶೀಲಿಸಿದ ಸಂದರ್ಭದಲ್ಲಿ ಹಾರಾಟಕ್ಕೆ ತೊಂದರೆಯಿಲ್ಲ ಎನ್ನುವುದು ದೃಢವಾಗಿತ್ತು.

ಕುನೂರ್‌ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ದಾರಿ ಕಾಣದಿದ್ದ ಕಾರಣದಿಂದ ದುರಂತ ಸಂಭವಿಸಿರುವ ಸಾಧ್ಯತೆಯಿದೆ ಎಂದು ವರದಿ ಯಲ್ಲಿ ಅಭಿಪ್ರಾಯಪಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಅಕ್ರಮವಾಗಿ ಒಳನುಸುಳಲು ಯತ್ನಿಸಿದ ಪಾಕ್‌ ಸೈನಿಕನ ಹೊಡೆದುರುಳಿಸಿದ ಸೇನೆ

Advertisement

Udayavani is now on Telegram. Click here to join our channel and stay updated with the latest news.

Next