Advertisement

Bad weather: ವಾರಾಣಸಿಯಲ್ಲಿ ಉಳಿದ ಕೆಕೆಆರ್‌ ತಂಡ

10:11 PM May 07, 2024 | Team Udayavani |

ಹೊಸದಿಲ್ಲಿ: ಹವಾಮಾನ ವೈಪರೀತ್ಯದಿಂದಾಗಿ ಕೋಲ್ಕತಾ ನೈಟ್‌ರೈಡರ್ ಆಟಗಾರರು ಒಂದು ದಿನವನ್ನು ವಾರಾಣಸಿಯಲ್ಲಿ ಕಳೆದಿದ್ದಾರೆ. ಪಂದ್ಯದ ಬಳಿಕ ಕೆಕೆಆರ್‌ ಆಟಗಾರರು ಕೋಲ್ಕತಾಗೆ ಪ್ರಯಾಣಿಸುತ್ತಿದ್ದ ವಿಮಾನವನ್ನು ಹವಾಮಾನ ವೈಪರೀತ್ಯ ಕಾರಣಕ್ಕೆ ವಾರಾಣಸಿಯಲ್ಲಿ ಇಳಿಸಲಾಯಿತು. ಹೀಗಾಗಿ ಆಟಗಾರರು ಇಡೀ ದಿನ ವಾರಾಣಸಿಯಲ್ಲಿ ಕಳೆದಿದ್ದಾರೆ.

Advertisement

ಕೋಲ್ಕತಾ ತಂಡ ಸೋಮವಾರ ಸಾಯಂಕಾಲ 4.45ಕ್ಕೆ ಖಾಸಗಿ ವಿಮಾನದಲ್ಲಿ ಲಕ್ನೋದಿಂದ ಕೋಲ್ಕತಾಗೆ ಪ್ರಯಾಣಿಸಿತ್ತು. ಈ ವಿಮಾನ ರಾತ್ರಿ 7.25ಕ್ಕೆ ಕೋಲ್ಕತಾ ತಲುಪಬೇಕಾಗಿತ್ತು. ಆದರೆ ಹವಾಮಾನ ವೈಪರೀತ್ಯದ ಕಾರಣದಿಂದ ವಿಮಾನವನ್ನು ಇಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ವಿಮಾನವನ್ನು ಮೊದಲು, ಗುವಾಹಾಟಿಯಲ್ಲಿ ಬಳಿಕ ವಾರಾಣಸಿಯಲ್ಲಿ ಇಳಿಸಲಾಯಿತು.

ಆ ಬಳಿಕ ತಂಡದ ಸದಸ್ಯರು ವಾರಾಣಸಿಯ ಹೊಟೇಲ್‌ನಲ್ಲಿ ನಿಂತರು. ಕೋಲ್ಕತಾ ಮೇ 11ರಂದು ತನ್ನ ಮುಂದಿನ ಪಂದ್ಯವನ್ನು ಈಡನ್‌ ಗಾರ್ಡನ್‌ನಲ್ಲಿ ಮುಂಬೈ ವಿರುದ್ಧ ಆಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next