Advertisement

Karkala ಪೂರ್ವ ದ್ವೇಷದ ಹಿನ್ನೆಲೆ; ತಂಡದಿಂದ ಯುವಕನಿಗೆ ಕೊಲೆ ಬೆದರಿಕೆ

11:52 PM Jun 03, 2024 | Team Udayavani |

ಕಾರ್ಕಳ: ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಯುವಕರ ತಂಡವೊಂದು ಯುವಕನೋರ್ವನನ್ನು ಅಡ್ಡಗಟ್ಟಿ ಕೊಲೆ ಬೆದರಿಕೆಯೊಡ್ಡಿದ ಘಟನೆ ಈದುವಿನ ಮಂಗಳಾ ಫಾರ್ಮ್ ಬಳಿ ನಡೆದಿದೆ.

Advertisement

ಈದು ಗ್ರಾಮದ ಜಯ (34) ಹಾಗೂ ವಿಘ್ನೇಶ್ ಅವರಿಗೆ 2 ತಿಂಗಳ ಹಿಂದೆ ನೆಲ್ಲಿಕಾರು ಎನ್ನುವಲ್ಲಿ ಗಲಾಟೆ ನಡೆದಿತ್ತು.

ಈ ಕುರಿತು ಮೂಡುಬಿದಿರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣ ಮುಂದಿಟ್ಟುಕೊಂಡು ಎ. 1ರಂದು ವಿಕಾಸ್‌, ವಿಘ್ನೇಶ್‌, ವಿಶ್ವಾಸ್‌, ಸತೀಶ್‌ ಅವರುಗಳನ್ನೊಳಗೊಂಡ ತಂಡ ಈದು ಗ್ರಾಮಕ್ಕೆ ಎರಡು ಬೈಕುಗಳಲ್ಲಿ ಆಗಮಿಸಿ ಸ್ನೇಹಿತನೊಂದಿಗೆ ಬೈಕಿನಲ್ಲಿ ತೆರಳುತಿದ್ದ ಜಯ ಅವರನ್ನು ಅಡ್ಡಗಟ್ಟಿ ಬೆದರಿಕೆ ಒಡ್ಡಿದ್ದಾರೆ. ತಂಡದಲ್ಲಿದ್ದ ಆರೋಪಿ ವಿಕಾಸ್‌ ಕೈಯಲ್ಲಿ ಚೂರಿ ಹಿಡಿದು ಕೊಲ್ಲುವುದಾಗಿ ಜೀವಬೆದರಿಕೆ ಹಾಕಿದ್ದ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2 ತಿಂಗಳ ಹಿಂದೆ ಇಬ್ಬರ ನಡುವೆ ಜಗಳ ಸಂಭವಿಸಿತ್ತು. ಇದನ್ನೆ ನೆಪವಾಗಿರಿಸಿ ತಂಡ ಈ ಕೃತ್ಯ ಎಸಗಿದ್ದಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next