Advertisement

ಪ್ರಧಾನಿ ಮೋದಿ ಹುಟ್ಟುಹಬ್ಬದ ದಿನದಂದು ಜನಿಸಿದ ಮಗುವಿಗೆ ‘ನರೇಂದ್ರ’ಎಂದು ಹೆಸರಿಟ್ಟ ದಂಪತಿ

06:21 PM Sep 17, 2021 | Team Udayavani |

ಬೀದರ್ : ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಶುಕ್ರವಾರ ನಗರದ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯಲ್ಲಿ ಜನಿಸಿದ ಪುತ್ರನಿಗೆ ‘ನರೇಂದ್ರ’ ಎಂದು ಹೆಸರಿಟ್ಟು ದಂಪತಿ ಗಮನ ಸೆಳೆದರು.

Advertisement

ಚಿಟಗುಪ್ಪ ತಾಲೂಕಿನ ನಿರ್ಣಾವಾಡಿಯ ಅಂಬಿಕಾ ವೀರಶೆಟ್ಟಿ ರಂಜೇರಿ ದಂಪತಿ ತಮ್ಮ ಮಗನಿಗೆ ನರೇಂದ್ರ ಎಂದು ನಾಮಕರಣ ಮಾಡಿದವರು. ಪ್ರಧಾನಿ ಜನ್ಮದಿನದಂದು ಪುತ್ರ ಜನಿಸಿದ್ದಕ್ಕೆ ಸಂತಸವಾಗಿದೆ. ಹೀಗಾಗಿ ಈ ದಿನದ ಸವಿನೆನಪಿಗಾಗಿ ಮಗನಿಗೆ ನರೇಂದ್ರ ಎಂದು ಹೆಸರಿಟ್ಟಿದ್ದೇವೆ ಎಂದು ಅಂಬಿಕಾ ಹೇಳಿದರು.

ದಂಪತಿ ತಮ್ಮ ಪುತ್ರನಿಗೆ ನರೇಂದ್ರ ಎಂದು ಹೆಸರು ಇಟ್ಟಿರುವುದು ಸಂತಸ ತಂದಿದೆ. ಪ್ರಧಾನಿ ಜನ್ಮದಿನದಂದು ಕರುಳ ಬಳ್ಳಿಗೆ ನರೇಂದ್ರ ಎಂದು ನಾಮಕರಣ ಮಾಡಿರುವುದು ದೇಶದ ಜನ ನರೇಂದ್ರ ಮೋದಿ ಅವರ ಮೇಲೆ ಇಟ್ಟಿರುವ ಪ್ರೀತಿ, ಅಭಿಮಾನಕ್ಕೆ ಸಾಕ್ಷಿಯಾಗಿದೆ ಎಂದು ಆಸ್ಪತ್ರೆಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.

ಇದನ್ನೂ ಓದಿ : ದೇಶದ ಎಲ್ಲಾ ಸಂಕಟಗಳಿಗೆ ಮೋದಿ ಸರ್ಕಾರವೇ ಕಾರಣ : ರಕ್ಷಾ ರಾಮಯ್ಯ

ಹಣ್ಣುಹಂಪಲು ವಿತರಣೆ: ಪ್ರಧಾನಿ ಮೋದಿ ಅವರ ಜನ್ಮದಿನದ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ನಗರದ ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಬಿಜೆಪಿ ಜಿಲ್ಲಾ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಉಪಾಧ್ಯಕ್ಷರಾದ ಪ್ರಕಾಶ ಟೊಣ್ಣೆ, ಪ್ರಸನ್ನಲಕ್ಷ್ಮಿ ದೇಶಪಾಂಡೆ, ನಗರ ಅಧ್ಯಕ್ಷ ಹಣಮಂತ ಬುಳ್ಳಾ, ಪ್ರಮುಖರಾದ ಸುನೀಲ್ ಗೌಳಿ, ಅನಿಲ್ ರಾಜಗೀರಾ, ಚಂದ್ರಶೇಖರ ಪಾಟೀಲ ಶೇಕಾಪುರ, ಸಚ್ಚಿದಾನಂದ ಚಿದ್ರೆ, ಡಾ. ಕಪಿಲ್ ಪಾಟೀಲ, ನಿತಿನ್ ಕರ್ಪೂರ, ಕೈಲಾಶನಾಥ ಕಾಜಿ, ಸುನೀಲ್ ದಳವೆ, ಆಸ್ಪತ್ರೆ ಸಿಇಒ ಕೃಷ್ಣಾರೆಡ್ಡಿ, ರಾಮಶೆಟ್ಟಿ ಹಾವಶೆಟ್ಟಿ ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next