Advertisement

ಬಾಬ್ರಿ ಮಸೀದಿ ಪ್ರಕರಣ: ಆರೋಪ ಕೈಬಿಡಲು ಹೈಕೋರ್ಟ್‌ ನಕಾರ

01:00 AM Nov 10, 2022 | Team Udayavani |

ಅಲಹಾಬಾದ್‌: ಅಯೋಧ್ಯೆಯಲ್ಲಿ ಇದ್ದ ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ, ಮಾಜಿ ಸಚಿವೆ ಉಮಾ ಭಾರತಿ ಸೇರಿದಂತೆ 32 ಮಂದಿ ವಿರುದ್ಧದ ಆರೋಪಗಳನ್ನು ಕೈಬಿಡಲು ಅಲಹಾಬಾದ್‌ ಹೈಕೋರ್ಟ್‌ ಪೀಠ ನಿರಾಕರಿಸಿದೆ.

Advertisement

ಈ ಬಗ್ಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಅದು ತಿರಸ್ಕರಿಸಿದೆ. ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ರಚನೆ ಮಾಡಲಾಗಿರುವ ವಿಶೇಷ ನ್ಯಾಯಾಲಯ ಮುಖಂಡರ ವಿರುದ್ಧ ಆರೋಪಗಳನ್ನು ದೃಢಪಡಿಸಿತ್ತು.

ನ್ಯಾ| ರಮೇಶ್‌ ಸಿನ್ಹಾ ಮತ್ತು ನ್ಯಾ| ಸರೋಜ್‌ ಯಾದವ್‌ ನೇತೃತ್ವದ ನ್ಯಾಯಪೀಠ ಅ. 31ರಂದು ತೀರ್ಪು ಕಾಯ್ದಿರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next