Advertisement

ಬಾಬ್ರಿ ಧ್ವಂಸ ಪ್ರಕರಣ; ಅಡ್ವಾಣಿ ,ಉಮಾ ಖುದ್ದು ಹಾಜರಿಗೆ ವಿನಾಯ್ತಿ

03:56 PM Jun 07, 2017 | Team Udayavani |

ಲಕ್ನೋ: ಬಾಬರಿ ಮಸೀದಿ ಧ್ವಂಸ ಕ್ರಿಮಿನಲ್ ಪಿತೂರಿ ಪ್ರಕರಣದ ವಿಚಾರಣೆಗೆ ಬಿಜೆಪಿ ಹಿರಿಯ ಮುಖಂಡರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಹಾಗೂ ಕೇಂದ್ರ ಸಚಿವೆ ಉಮಾ ಭಾರತಿ ಅವರ ಖುದ್ದು ಹಾಜರಾತಿಗೆ ಸಿಬಿಐ ವಿಶೇಷ ಕೋರ್ಟ್ ಬುಧವಾರ ವಿನಾಯ್ತಿ ನೀಡಿದೆ.

Advertisement

ಏಪ್ರಿಲ್ 19ರಂದು ಬಾಬ್ರಿ ಧ್ವಂಸ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಎಲ್ ಕೆ ಅಡ್ವಾಣಿ ಸೇರಿದಂತೆ ಪ್ರಕರಣದಲ್ಲಿ ಶಾಮೀಲಾದವರ ವಿರುದ್ಧ ಕ್ರಿಮಿನಲ್ ಸಂಚಿನ ಆರೋಪ ಕೈಬಿಡದಂತೆ ಸಿಬಿಐ ವಿಶೇಷ ಕೋರ್ಟ್ ಗೆ ನಿರ್ದೇಶನ ನೀಡಿ, ಎರಡು ವರ್ಷದೊಳಗೆ ಅಂತಿಮ ತೀರ್ಪು ನೀಡುವಂತೆ ಸೂಚಿಸಿತ್ತು.

ಈ ಹಿನ್ನೆಲೆಯಲ್ಲಿ 1992ರಲ್ಲಿ ಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಶಾಮೀಲಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಎಲ್‍ಕೆ ಅಡ್ವಾಣಿ ಸೇರಿದಂತೆ 13 ಜನರ ವಿರುದ್ಧ ಕ್ರಿಮಿನಲ್ ಸಂಚಿನ ಆರೋಪ ಕೈಬಿಡದ ಸಿಬಿಐ ಕೋರ್ಟ್ ಅಡ್ವಾಣಿ ಸೇರಿದಂತೆ ಬಿಜೆಪಿ ಮುಖಂಡರಿಗೆ ತಲಾ 50 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಆಧಾರದ ಮೇಲೆ ಜಾಮೀನು ನೀಡಿತ್ತು.

(ಇದನ್ನೂ ಓದಿ: ಗೋಹತ್ಯೆ, ಕಳ್ಳಸಾಗಣೆ ವಿರುದ್ಧ ಎನ್ಎಸ್ಎ, ಗೂಂಡಾ ಕಾಯ್ದೆ!)

Advertisement

Udayavani is now on Telegram. Click here to join our channel and stay updated with the latest news.

Next