Advertisement

ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಲು ಯಡಿಯೂರಪ್ಪ ಕರೆ

05:27 PM Jun 08, 2022 | Team Udayavani |

ಚಿಕ್ಕೋಡಿ: ಬಿಜೆಪಿ ಕಾರ್ಯಕರ್ತರು ವಿಶ್ರಾಂತಿ ಪಡೆಯದೇ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಪಣ ತೊಡಬೇಕು ಎಂದು  ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

Advertisement

ವಾಯವ್ಯ ಶಿಕ್ಷಕರ ಮತಕ್ಷೇತ್ರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಧಾನಿ ಮೋದಿ ಒಂದು ದಿನ ವಿಶ್ರಾಂತಿ ಪಡೆದಿಲ್ಲ.ಅವರ ಹಾಗೇ ಪದಾಧಿಕಾರಿಗಳು ಪದವೀಧರ ಹಾಗೂ ಶಿಕ್ಷಕರ ಮತದಾರರನ್ನು ಕರೆ ತಂದು ಮತದಾನ ಮಾಡಿಸಬೇಕು. ವಿಧಾನ ಪರಿಷತ್ ದಲ್ಲಿ ಬಿಜೆಪಿಗೆ ಬಹುಮತ ಸಿಗಬೇಕು. ಹೀಗಾಗಿ ಬಿಜೆಪಿ ಗೆಲ್ಲುವುದು ಮುಖ್ಯವಾಗಿದೆ ಎಂದರು.

ಸರಕಾರಿ ನೌಕರರ ಪರವಾಗಿ ಬಿಜೆಪಿ ನಿಂತಿದೆ. ಈ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸಬೇಕು. ಸಾಧನೆ ಮಾತನಾಡಬೇಕು ಮಾತೇ ಸಾಧನೆ ಆಗಬಾರದು. ಬಿಜೆಪಿ ಅಭಿವೃದ್ಧಿ ಕಾರ್ಯಗಳನ್ನು ಮತದಾರರಿಗೆ ತಿಳಿಸುವ ಕೆಲಸ ನಡೆಯಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ,. ಕಾಂಗ್ರೆಸ್ ನವರು ಜಾತಿಜಾತಿಗಳ ಮಧ್ಯೆ ವಿಷಬೀಜ ಬಿತ್ತಿ 60 ವರ್ಷ ಆಡಳಿತ ನಡೆಸಿದರು. ಈಗ ಜನ ಜಾಗೃತಿ ಆಗಿರುವುದರಿಂದ ಬಿಜೆಪಿ ದೊಡ್ಡಮಟ್ಟದಲ್ಲಿ ಬೆಳೆದಿದೆ. ಮೋದಿ ಒಬ್ಬ ಸಮರ್ಥ ನಾಯಕರಾಗಿ ದೇಶ ಮುನ್ನಡೆಸಿಕೊಂಡು ಹೋಗುತ್ತಿದೆ ಎಂದರು.

Advertisement

ಲಕ್ಷ್ಮಣ ಸವದಿ ಮಾತನಾಡಿ, ವಿಧಾನ ಪರಿಷತ್ ಗಂಜಿಕೇಂದ್ರವಲ್ಲ ಅದೊಂದು ಚಿಂತಕರಚಾವಡಿ. ವಿಶ್ರಾಂತಿ ತೆಗೆದುಕೊಳ್ಳುವ ವ್ಯಕ್ತಿ ಕಾಂಗ್ರೆಸ್ ದಿಂದ ಸ್ಪರ್ಧೆ ಮಾಡಿರುವುದು ಯಾವ ಕಾರಣಕ್ಕಾಗಿ ಎಂದು ಟೀಕಿಸಿದರು.

ಸಚಿವ ಉಮೇಶ ಕತ್ತಿ ಮಾತನಾಡಿ, ರಾಜಕಾರಣದಲ್ಲಿ ಉದ್ಯೋಗ ಮಾಡಿಕೊಂಡಿರುವ ಪ್ರಕಾಶ ಹುಕ್ಕೇರಿ ಪದವೀಧರ ಮತ್ತು ಶಿಕ್ಷಕರು ಅಲ್ಲ ಅವರಿಗೆಕ್ಕೆ ಮತ ಹಾಕುತ್ತಿರಾ? ಎಂದು ಪ್ರಶ್ನಿಸಿದರು.

ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ,ಬಿಜೆಪಿ ಸರಕಾರದ ಅವದಿಯಲ್ಲಿ ಶಿಕ್ಷಕರ ಬೇಡಿಕೆಗೆ ಸ್ಪಂಧಿಸಿದ್ದಾರೆ. ಅರುಣ ಶಹಾಪೂರ ಒಳ್ಳೆಯ ಕೆಲಸಗಾರ ಎಂದರು.

ಪರಿಷತ್ ಮಾಜಿ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ,ಖಾಸಗಿ ಶಾಲೆಗಳಿಗೆ ಯಡಿಯೂರಪ್ಪ ಅನುದಾನ ನೀಡಿದ್ದಾರೆ. ಜ್ವಲಂತ ಸಮೊ ಪರಿಹಾರ ನೀಡಿರುವುದು ಬಿಜೆಪಿ. ವಿರೋಧ ಪಕ್ಷದ ಅಭ್ಯರ್ಥಿ ರಾಜಕೀಯ ಪುನರಕ್ಕಾಗಿ ಸ್ಪರ್ಧೆ ಮಾಡಿದ್ದಾರೆ. ವಿನಃ ಶಿಕ್ಷಣದ ಅಭಿವೃದ್ಧಿಗೆ ಸ್ಪರ್ಧೆ ಮಾಡಿಲ್ಲ ಎಂದರು.

ಪದವೀಧರ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ನಾಯಿಕ. ವಾದಿಗಳಿಗೆ ಸಹಾಯವಾಗಿ ಯಡಿಯೂರಪ್ಪ 10 ಕೋಟಿ ರೂ ಅನುದಾನ ನೀಡಿದ್ದಾರೆ. ಕೊರೊನಾ ಸಂಕಷ್ಟ ಕಾಲದಲ್ಲಿ ಸಾಧ್ಯವಾದಷ್ಟು ಸಹಾಯ ಮಾಡಲಾಗಿದೆ. ಮತ್ತೊಮ್ಮೆ ಅವಕಾಶ ಕಲ್ಪಿಸಬೇಕು ಎಂದರು.

ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪೂರ ಮಾತನಾಡಿ, ಕಾಲ್ಪನಿಕ ವೇತನ ತಡೆಹಿಡಿದಿದ್ದು ಕಾಂಗ್ರೆಸ್ ಪಕ್ಷ. ಶಿಕ್ಷಕರೆಗೆ  ಹಾಡಿಸ್ದುಯ ಬಿಜೆಪಿ. ಹೀಗಾಗಿ ಬರುವ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಬೇಕು ಎಂದರು.

ವೇದಿಕೆ ಮೇಲೆ ಸಚಿವ ಮುರಗೇಶ ನಿರಾಣಿ. ಸಂಸದ ಅಣ್ಣಾಸಾಹೇಬ ಜೊಲ್ಲೆ. ಶಾಸಕರಾದ  ಪಿ.ರಾಜೀವ. ದುರ್ಯೋಧನ ಐಹೋಳೆ. ಮಹೇಶ ಕುಮಟೋಳ್ಳಿ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ. ಪರಿಷತ್ ಮಾಜಿ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ. ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ. ಜಗದೀಶ ಕವಟಗಿಮಠ. ಬಿಜೆಪಿ ಅಭ್ಯರ್ಥಿ ಅರುಣ ಶಹಾಪೂರ. ಹಣಮಂತ ನಿರಾಣಿ. ವೈ ನಾರಾಯಣಸ್ವಾಮಿ. ಸಂಜಯ ಕವಟಗಿಮಠ. ಶಶಿಕಾಂತ ನಾಯಿಕ.ದುಂಡಪ್ಪ ಬೆಂಡವಾಡೆ. ಅಶೋಕ ಹರಗಾಪೂರೆ. ಬರತೇಶ ಬನವಣೆ. ಮಲ್ಲಿಕಾರ್ಜುನ ಕೋರೆ ಮುಂತಾದವರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next