Advertisement

ನಾಲ್ಕೂವರೆ ವರ್ಷ ಕತ್ತೆ ಕಾಯ್ತಿದ್ರಾ? 

07:00 AM Oct 29, 2017 | Team Udayavani |

ಧಾರವಾಡ: “ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿದ್ಯುತ್‌ ಖರೀದಿ ಹಗರಣ ನಡೆದಿದೆ ಎಂದು ಈಗ ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ಕೂವರೆ ವರ್ಷ ಕತ್ತೆ ಕಾಯ್ತಿದ್ರಾ? ಇದ್ದಕ್ಕಿದ್ದಂತೆ ಈಗೇಕೆ ಇವರಿಗೆ ಹಗರಣಗಳು ನೆನಪಾಗುತ್ತಿವೆ’ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.

Advertisement

ಶನಿವಾರ ಮಾಧ್ಯಮ ಗಳೊಂದಿಗೆ ಮಾತನಾಡಿ, “ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ವಿದ್ಯುತ್‌ ಇಲಾಖೆಯಲ್ಲಿ ಏನೋ ಹಗರಣ ನಡೆದು ಬಿಟ್ಟಿದೆ ಎಂದು ಈಗ ಸಿದ್ದರಾಮಯ್ಯನವರು ಬಿಂಬಿಸುತ್ತಿದ್ದಾರೆ. ಅವರಿಗೆ ಅಧಿಕಾರದ ಮದ ನೆತ್ತಿಗೇರಿದೆ. ಶೀಘ್ರದಲ್ಲೇ ರಾಜ್ಯ ಸರ್ಕಾರದ ಹಗರಣಗಳ ದಾಖಲೆ ಬಿಡುಗಡೆ ಮಾಡಿ ಅವರ ಢೋಂಗಿತನವನ್ನು ದಾಖಲೆ ಸಮೇತ ಬಯಲು ಮಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next