Advertisement

“ಮಾತೆರೆಗ್ ಬಿಸುತ ಸುಭಾಸುಯೊಲು” ತುಳುವರ ಹೊಸ ವರ್ಷಕ್ಕೆ ತುಳುವಿನಲ್ಲಿ ಶುಭಕೋರಿದ ಬಿಎಸ್ ವೈ

09:08 AM Apr 15, 2020 | keerthan |

ಬೆಂಗಳೂರು: ಇಂದು ಸೌರಮಾನ ಯುಗಾದಿ. ಹಿಂದೂ ಪಂಚಾಂಗಗಳ ಪ್ರಕಾರ ಇಂದು ಹೊಸ ವರ್ಷದ ಮೊದಲ ದಿನ. ದೇಶದ ಹಲವು ರಾಜ್ಯಗಳಲ್ಲಿ ಹಲವು ರೀತಿಯಲ್ಲಿ ಇದನ್ನು ಆಚರಿಸಲಾಗುತ್ತದೆ. ತುಳುನಾಡಿನಲ್ಲಿ ‘ಬಿಸು’ಹಬ್ಬವಾಗಿ ಆಚರಿಸಲಾಗುತ್ತದೆ.

Advertisement

ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತುಳುನಾಡಿನ ಜನರಿಗೆ ಬಿಸು ಹಬ್ಬದ ಶುಭಾಶಯ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ತುಳುವಿನಲ್ಲೇ ಟ್ವೀಟ್ ಮಾಡಿದ್ದಾರೆ.

ಬಿಸುತ ದಿನ ಪೊಸತ್ ಮನಸ್, ಪೊಸತ್ ಕನಸ್ ಪೊಸತ್ ತೆನಸ್, ಮಾತಲಾ ಪೊಸತ್ ಪೊಸತ್ ಆವಡ್  ಪೊಸ ವರ್ಷೊಡು ಪರತ್ ಮಹಾಮಾರಿ  ದೂರ ಅದ್ ಸುಖ ಸಂತೋಸ ನೆಲೆಸಡ್. ಮಾತೆರೆಗ್ ಬಿಸುತ ಸುಭಾಸುಯೊಲು ( ಯುಗಾದಿ ದಿನ ಹೊಸ ಮನಸ್ಸು, ಹೊಸ ಕನಸು, ಹೊಸ ಊಟ, ಎಲ್ಲವೂ ಹೊಸತಾಗಿರಲಿ. ಹೊಸ ವರ್ಷದಲ್ಲಿ ಹಳೆ ಮಹಾಮಾರಿ ದೂರವಾಗಿ ಸುಖ ಸಂತೋಷ ನೆಲೆಸಲಿ. ಎಲ್ಲರಿಗೂ ಬಿಸು ಹಬ್ಬದ ಶುಭಾಶಯಗಳು) ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next