Advertisement
ನಗರದ ಬಿಎಲ್ಡಿಇ ವೈದ್ಯಕೀಯ ವಿವಿಯ ಗ್ರಂಥಾಲಯ ಸಭಾಂಗಣದಲ್ಲಿ ಚಿಂತನ-ಸಾಂಸ್ಕೃತಿಕ ಬಳಗದಿಂದ ಗುರುವಾರ ಏರ್ಪಡಿಸಲಾಗಿದ್ದ ಜ್ಞಾನದಾಸೋಹಿ ಶ್ರೀ ಬಂಥನಾಳ ಶಿವಯೋಗಿಗಳು, ದಾನ ಚಿಂತಾಮಣಿ ಬಂಗಾರೆಮ್ಮ ಸಜ್ಜನ, ವಚನ ಪಿತಾಮಹ ಡಾ| ಫ.ಗು. ಹಳಕಟ್ಟಿ ಹಾಗೂ ಮಾಜಿ ಸಚಿವ ದಿ| ಬಿ.ಎಂ. ಪಾಟೀಲ ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿಅವರು ಪ್ರಧಾನ ಭಾಷಣ ಮಾಡಿದರು. ದಿ| ಬಿ.ಎಂ. ಪಾಟೀಲ ವಿಜಯಪುರ ಜಿಲ್ಲೆಯ ಮಟ್ಟಿಗೆ ಅಭಿವೃದ್ಧಿ ಹರಿಕಾರ ಎನಿಸಿದ್ದರು. ಇದೀಗ ಅವರ ಮಗ ಜಲಸಂಪನ್ಮೂಲ ಸಚಿವನಾಗಿ ಜಿಲ್ಲೆಯಲ್ಲಿ ಕೆರೆ ತುಂಬಿಸುವ ಮಹತ್ವದ ಕಾರ್ಯ ಮಾಡುವ ಮೂಲಕ ತಂದೆ ಕನಸು ನನಸಾಗಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
Related Articles
ಬಂಗಾರೆಮ್ಮ ಸಜ್ಜನ, ಮಾಜಿ ಸಚಿವ ಬಿ.ಎಂ. ಪಾಟೀಲ ಅವರ ಸರಳ ವ್ಯಕ್ತಿತ್ವದ ಪರಿಶುಭ್ರ ರಾಜಕೀಯ ಇಂದಿನ ನಮಗೆಲ್ಲ ಆದರ್ಶ ಎಂದು ಹೇಳಿದರು. ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಜಲಸಂಪನ್ಮೂಲ ಸಚಿವ ಹಾಗೂ ಬಿಎಲ್ಡಿಇ ಸಂಸ್ಥೆ ಅಧ್ಯಕ್ಷ ಎಂ.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಿಎಲ್ಡಿಇ ಸಂಸ್ಥೆ ಉಪಾಧ್ಯಕ್ಷ ಬಿ.ಆರ್. ಪಾಟೀಲ ಲಿಂಗದಳ್ಳಿ ಇದ್ದರು. ಕಲಾವಿದ ಬಸವರಾಜ ಹಿರೇಮಠ ಪ್ರಾರ್ಥಿಸಿದರು. ಡಾ| ವಿ.ಡಿ. ಐಹೊಳ್ಳಿ ನಿರೂಪಿಸಿದರು.
Advertisement
ಸಮಾಜಮುಖೀ ಮಹಾತ್ಮರನ್ನು ಸ್ಮರಿಸುವುದೇ ಧರ್ಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಸಮಾಜಮುಖೀ ಸೇವಾ ಕಾರ್ಯ ಮಾಡುವ ವ್ಯಕ್ತಿಗಳು ಸಮಾಜದಿಂದ ಸದಾ ಸ್ಮರಣಾರ್ಹರಾಗಿರುತ್ತಾರೆ. ಉತ್ತಮ ಕೆಲಸ ಮಾಡಿದ ಮಹಾತ್ಮರನ್ನು ಸ್ಮರಿಸುವ ಮೂಲಕ ನಾವು
ಸಂತೋಷಪಡುವುದೇ ಧರ್ಮ ಎಂದು ಹೇಳಿದರು. ಶಿವಯೋಗದ ಸೌರಭವನ್ನು ಬಂಥನಾಳ ಶಿವಯೋಗಿಗಳು ಪಸರಿಸಿದರೆ, ದಾನ ಚಿಂತಾಮಣಿ ಬಂಗಾರೆಮ್ಮ ಸಜ್ಜನ ಜ್ಞಾನ ಪ್ರಸಾರಕ್ಕಾಗಿ ಶಿಕ್ಷಣ ಸಂಸ್ಥೆಗೆ ಆಸ್ತಿಯನ್ನೇ ದಾನವಾಗಿ ನೀಡಿದರು. ನುಡಿದಂತೆ ನಡೆದ ಶರಣರ ವಚನ ಸಾಹಿತ್ಯ ಸಂಗ್ರಹಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಡಾ| ಫ.ಗು.
ಹಳಕಟ್ಟಿ ಅವರು ವಚನ ಪಿತಾಮಹ ಎಂದು ಕರೆಸಿಕೊಂಡು ತಾವುಕೂಡ ಶರಣರಾದರು. ರಾಜಕೀಯ ಜೀವನದಲ್ಲಿ ಪರಿಶುದ್ಧ ಜೀವನ ನಡೆಸಿದ ದಿ| ಬಿ.ಎಂ.ಪಾಟೀಲ ಅವರು ಮಹಾತ್ಮರ ಸಾಲಿಗೆ ಸೇರಿದರು ಎಂದು ವಿಶ್ಲೇಷಿಸಿದರು.