Advertisement

ಸಿದ್ದರಾಮಯ್ಯಗೆ ಕ್ಷೇತ್ರ ತ್ಯಾಗ ಮಾಡಿದ್ದು ನಾನು: ಗೊಂದಲದ ಗೂಡಾದ ಕೈ ಸಭೆ

05:03 PM Dec 06, 2021 | Team Udayavani |

ಬಾಗಲಕೊಟೆ: ಮಾಜಿ ಸಚಿವ, ಕಾಂಗ್ರೆಸ್ ನಾಯಕ ಬಿ.ಬಿ. ಚಿಮ್ಮನಕಟ್ಟಿ ಅವರು ಆಡಿದ ಮಾತುಗಳಿಂದ ಸೋಮವಾರ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆ ಗೊಂದಲದ ಗೂಡಾದ ಘಟನೆ ನಡೆದಿದೆ.

Advertisement

ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಸಿದ್ದರಾಮಯ್ಯಗೆ ಬಾದಾಮಿ ಮತಕ್ಷೇತ್ರ ಬಿಟ್ಟುಕೊಟ್ಟಿದ್ದ ಮಾಜಿ ಸಚಿವ ಚಿಮ್ಮನಕಟ್ಟಿ ಅವರು ಮಾತನಾಡಿ,ಸಿದ್ದರಾಮಯ್ಯ ವರುಣಾ ಬಿಟ್ಟು ಬಾದಾಮಿಗೆ ಬಂದು ಸ್ಪಧೆ೯ ಮಾಡಿರುವ ಬಗ್ಗೆ ಪ್ರಸ್ತಾಪಿಸಿ ಗೊಂದಲಕ್ಕೆ ಕಾರಣವಾಯಿತು.

ವೇದಿಕೆಯಲ್ಲಿದ್ದ ಸಿದ್ದರಾಮಯ್ಯ ಅವರಿಗೆ ಹೇಳಿಕೆ ತೀವ್ರ ಮುಜಗರ ತಂದಿಟ್ಟರೇ, ಚಿಮ್ಮನಕಟ್ಟಿ ಮಾತಿಗೆ ಕೆಲವರಿಂದ ಕೇಕೆ, ಇನ್ನು ಕೆಲವರಿಂದ ಅಸಮಾಧಾನ ವ್ಯಕ್ತವಾಯಿತು.

ವೇದಿಕೆ ಮುಂದೆ ಜಮಾಯಿಸಿದ ಜನರನ್ನು ನಿಯಂತ್ರಿಸಲು,ಮಾಜಿ ಸಚಿವ ಚಿಮ್ಮನಕಟ್ಟಿ ಸಮಾಧಾನಪಡಿಸಲು ಪೋಲಿಸರು ಹರಸಾಹಸ ಪಟ್ಟರು.

ಅತ್ತ ಅಭಿಮಾನಿಗಳು ಸಿದ್ದರಾಮಯ್ಯ ಪರ ಘೋಷಣೆಗಳನ್ನು ಕೂಗಿದರೇ, ಇತ್ತ ಚಿಮ್ಮನಕಟ್ಟಿ ಸಮಾಧಾನಪಡಿಸಲು ಮುಂದಾದ ಅಭಿಮಾನಿಗಳು.

Advertisement

ಚಿಮ್ಮನಕಟ್ಟಿ ಹೇಳಿದ್ದೇನು ?

‘ಸಿದ್ದರಾಮಯ್ಯಗೆ ಕ್ಷೇತ್ರ ತ್ಯಾಗ ಮಾಡಿದ್ದು ನಾನು’ ಎಂದರು. ಈ ವೇಳೆ ‘ಹೌದು ಹುಲಿಯಾ’ ಎಂದ ಅಭಿಮಾನಿಗಳು. ಅಭಿಮಾನಿಗಳ ಕೂಗಿಗೆ ಭಾವುಕರಾದ ಚಿಮ್ಮನಕಟ್ಟಿ, ‘ನಾನು ಹುಲಿಯಾನೇ, ಆದರೆ ಈಗ ಇಲಿ ಆಗಿದ್ದೇನೆ.ನೀವು ಮಾಡಿದರೆ ಹುಲಿಯಾನೂ ಆಗ್ತೀನಿ.. ಮಂತ್ರಿನೂ ಆಗ್ತೀನಿ, ಮುಖ್ಯಮಂತ್ರಿನೂ ಆಗ್ತೀನಿ..ನೀವು ಮಾಡಿದ್ರೆ ಎಲ್ಲ ಆಗುತ್ತೆ.. ‘ಎಂದರು.

‘ಮೈಸೂರಿನ ವರುಣಾ ಮತ್ತು ಚಾಮುಂಡೇಶ್ವರಿ ಎರಡು ಕ್ಷೇತ್ರದಲ್ಲಿ ಅವರಿಗೆ ಅವಕಾಶ ಇದೆ’ ಎಂದು ಸಿದ್ದರಾಮಯ್ಯ ಹೆಸರು ಹೇಳದೆ ಅಸಮಾಧಾನ ವ್ಯಕ್ತಪಡಿಸಿದರು.’ನನಗೆ ಈ ಕ್ಷೇತ್ರ ಬಿಟ್ಟರೆ ಯಾವುದೇ ಅವಕಾಶ ಇಲ್ಲ. ಅವರಿಗಾಗಿ ನಾನು ಕ್ಷೇತ್ರ ತ್ಯಾಗ ಮಾಡಿದ್ದೀನಿ.ಅವರ ಕ್ಷೇತ್ರದಲ್ಲಿ ಅವರು ಗೆದ್ದರೆ ಅವರಿಗೆ ಯೋಗ್ಯತೆ ಇರುತ್ತದೆ’ ಎಂದು, ಪರೋಕ್ಷವಾಗಿ ಸಿದ್ದರಾಮಯ್ಯ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದರು.

ಈ ವೇಳೆ ಕೆಲ ಮುಖಂಡರು ಚಿಮ್ಮನಕಟ್ಟಿ ಭಾಷಣ ನಿಲ್ಲಿಸಲು ಮುಂದಾದರು. ಕೆಲ ಸಮಯ ಮೈಕ್ ಬಂದ್ ಮಾಡಿ ಚಿಮ್ಮನಕಟ್ಟಿಗೆ ಮನವಿ ಮಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next