Advertisement

ಮೈಸೂರು ಅರಮನೆ ಸೇರಿದಂತೆ ನಾಡಿನಾದ್ಯಂತ ಆಯುಧ ಪೂಜೆ ಸಂಭ್ರಮ

01:21 PM Sep 29, 2017 | Sharanya Alva |

ಮೈಸೂರು/ಬೆಂಗಳೂರು: ಮಳೆ ಆತಂಕದ ನಡುವೆ ಶನಿವಾರ ನಡೆಯಲಿರುವ ಅದ್ದೂರಿ ನಾಡಹಬ್ಬ 407ನೇ ದಸರಾ ಮಹೋತ್ಸವಕ್ಕೆ ಅರಮನೆ ನಗರಿ ಮೈಸೂರು ಸಜ್ಜುಗೊಂಡಿದ್ದರೆ, ಶುಕ್ರವಾರ ಮೈಸೂರು ಅರಮನೆ ಸೇರಿದಂತೆ ದೇಶಾದ್ಯಂತ ಆಯುಧ ಪೂಜೆ ಸಂಭ್ರಮದಿಂದ ನಡೆಯಿತು.

Advertisement

ಕಂಕಣಧಾರಿಯಾಗಿ ಶರನ್ನವರಾತ್ರಿ ಆಚರಣೆಯಲ್ಲಿರುವ ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಇಂದು ಬೆಳಗ್ಗೆ ಅರಮನೆ ಆಯುಧಗಳಿಗೆ ಪೂಜೆ ನೆರವೇರಿಸಿದರು. ಬಳಿಕ ಅರಮನೆ ಆವರಣದಲ್ಲಿರುವ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ರಾತ್ರಿ ಅರಮನೆಯಲ್ಲಿ ಬಲಿಪೂಜೆ ನಡೆಯಲಿದೆ.

ರಾಜಪೋಷಾಕಿನಲ್ಲಿ ಕಂಗೊಳಿತ್ತಿದ್ದ ಯದುವೀರ್ ಅವರು ಅರಮನೆ ಆಯುಧ, ಕತ್ತಿ, ಗುರಾಣಿಗಳಿಗೆ ಪೂಜೆ ನೆರವೇರಿಸಿದರು. ಅರಮನೆಯಲ್ಲಿ ದಸರಾ ಸಂಭ್ರಮ ಮನೆ ಮಾಡಿತ್ತು. ಅದೇ ರೀತಿ ನಾಡಿನಾದ್ಯಂತ ಆಯುಧ ಪೂಜೆ ಸಂಭ್ರಮದಿಂದ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next