Advertisement

ಉತ್ತರ ಪ್ರದೇಶ ಚುನಾವಣೆ: ಅಯೋಧ್ಯೆಗೇ ಆದ್ಯತೆ

07:55 PM Nov 17, 2021 | Team Udayavani |

ಅಯೋಧ್ಯೆ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯು ಅಯೋಧ್ಯೆಯನ್ನೇ ಮುಂದಿಟ್ಟುಕೊಂಡು ಮತಯಾಚನೆ ಮಾಡಲಿದೆ ಎಂದು ಹೇಳಲಾಗುತ್ತಿದೆ.

Advertisement

ಚುನಾವಣೆಗಳು ಸನ್ನಿಹಿತವಾಗುತ್ತಿದ್ದಂತೆಯೇ ಯೋಗಿ ಆದಿತ್ಯನಾಥ್‌ರ ಸರ್ಕಾರವು ಅಯೋಧ್ಯೆಗೆ ಆದ್ಯತೆ ನೀಡಿ ಕಾಮಗಾರಿಗಳಿಗೆ ಚಾಲನೆ ನೀಡಿದೆ.

ಡಿಸೆಂಬರ್‌ ತಿಂಗಳಲ್ಲಿ ನಗರದಲ್ಲಿ ಹಲವಾರು ಯೋಜನೆಗಳು ಉದ್ಘಾಟನೆಯಾಗಲಿದ್ದರೆ, ಇನ್ನೂ ಹಲವು ಕಾಮಗಾರಿಗಳಿಗೆ ಚಾಲನೆ ಸಿಗಲಿದೆ ಎಂದು ಅಯೋಧ್ಯೆಯ ಶಾಸಕ ವೇದ್‌ ಪ್ರಕಾಶ್‌ ಗುಪ್ತಾ ತಿಳಿಸಿದ್ದಾರೆ.

“ಕ್ವೀನ್‌ ಹಿಯೋ ಹ್ವಾಂಗ್‌ ಒಕೆ’ ಸ್ಮಾರಕ ಉದ್ಯಾನವನ, ಡಿಜಿಟಲ್‌ ವಸ್ತುಸಂಗ್ರಹಾಲಯಗಳ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಅದನ್ನು ಸಿಎಂ ಉದ್ಘಾಟಿಸಲಿದ್ದಾರೆ.

ಇದನ್ನೂ ಓದಿ:ಮಿಮಿ ಚಕ್ರವರ್ತಿಯ ಫೋನ್‌ ಗ್ಯಾಲರಿಯೇ ಮಂಗಮಾಯ!

Advertisement

ಪ್ರಧಾನ ಮಂತ್ರಿ ಗ್ರಾಮೀಣ ಸಡಕ್‌ ಯೋಜನೆಯಲ್ಲಿ ನಗರದಲ್ಲಿ 27 ರಸ್ತೆ ನಿರ್ಮಾಣ ಯೋಜನೆಗೆ ಕೇಂದ್ರ ಅನುಮೋದನೆ ನೀಡಿದೆ.

132.78 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಮುಂದಿನ ತಿಂಗಳು ಚಾಲನೆ ಸಿಗಲಿದೆ. ನಗರದ ಅಭಿವೃದ್ಧಿಯ ಮಾಸ್ಟರ್‌ ಪ್ಲಾನ್‌ ಕೂಡ ಮುಂದಿನ ತಿಂಗಳೇ ಅಂತಿಮವಾಗಲಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next