Advertisement

ನೈರುತ್ಯ ರೈಲ್ವೆಯಿಂದ ಜಾಗೃತಿ ಅಭಿಯಾನ

06:08 AM Jun 12, 2020 | Suhan S |

ಹುಬ್ಬಳ್ಳಿ: ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಸುರಕ್ಷತಾ ಶಾಖೆ ಅಂತಾರಾಷ್ಟ್ರೀಯ ಲೆವೆಲ್‌ ಕ್ರಾಸಿಂಗ್‌ ಜಾಗೃತಿ ದಿನವನ್ನು ಗುರುವಾರ ಆಚರಿಸಿತು.

Advertisement

ನೈರುತ್ಯ ರೈಲ್ವೆಯ ಪ್ರಧಾನ ಮುಖ್ಯ ಸುರಕ್ಷತಾ ಅಧಿಕಾರಿ ಎಂ.ಎ.ವಿ. ರಾಮಾನುಜನ್‌, ಹುಬ್ಬಳ್ಳಿ ವಿಭಾಗದ ಹಿರಿಯ ವಿಭಾಗೀಯ ಸುರಕ್ಷತಾ ಅಧಿಕಾರಿ ಜಗದೀಶ್‌ ಎಸ್‌. ರುದ್ರಸ್ವಾಮಿ ಮತ್ತು ಸಿಬ್ಬಂದಿಯೊಂದಿಗೆ ಲೆವೆಲ್‌ ಕ್ರಾಸಿಂಗ್‌ ಗೇಟ್‌ಗಳಲ್ಲಿ ರೈಲ್ವೆ ಅಪಘಾತ ತಪ್ಪಿಸಲು ಎಲ್‌ಸಿ ಗೇಟ್‌ ಸಂಖ್ಯೆ 297ರಲ್ಲಿ ಜಾಗೃತಿ ಅಭಿಯಾನ ನಡೆಸಿದರು.

ಕೋವಿಡ್‌-19ರ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸ್ಯಾನಿಟೈಸರ್‌ ಬಳಸಿ ಎಂದು ತಿಳಿ ಹೇಳಿ, ಜಾಗೃತಿ ಕರಪತ್ರಗಳನ್ನು ವಿತರಿಸಿದರು. ಲೆವೆಲ್‌ ಕ್ರಾಸಿಂಗ್‌ ಗೇಟ್‌ಗಳನ್ನು ಸಮೀಪಿಸುವಾಗ ರಸ್ತೆ ಬಳಕೆದಾರರು ಜಾಗರೂಕರಾಗಿರಲು ಹಾಗೂ ಲೆವೆಲ್‌ ಕ್ರಾಸಿಂಗ್‌ ಗೇಟ್‌ಗಳನ್ನು ಮುಚ್ಚಿರುವಾಗ ಅದನ್ನು ದಾಟಲು ಪ್ರಯತ್ನಿಸಬೇಡಿ ಎಂದು ಸೂಚಿಸಿದರು.

ಕೋವಿಡ್‌-19ರ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ ಆರ್‌ಟಿಒ ಕಚೇರಿ, ಲೆವೆಲ್‌ ಕ್ರಾಸಿಂಗ್‌ ಗೇಟ್‌ಗಳು, ಬಸ್‌ ಸ್ಟ್ಯಾಂಡ್‌, ಆಟೋ ರಿಕ್ಷಾ ಸ್ಟ್ಯಾಂಡ್‌, ದೇವಾಲಯಗಳು, ಪೆಟ್ರೋಲ್‌ ಪಂಪ್‌ಗಳು, ಹುಬ್ಬಳ್ಳಿಯ ಮುಖ್ಯ ರಸ್ತೆಗಳು ಮತ್ತು ಬೀದಿಗಳಲ್ಲಿ ಜಾಗೃತಿ ಅಭಿಯಾನ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next