Advertisement

ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಪ್ರಶಸ್ತಿ ಸಮಿತಿ

09:43 AM Jun 14, 2022 | Team Udayavani |

ಬೆಂಗಳೂರು: ವಿಧಾನಸಭೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಅಧ್ಯಕ್ಷತೆಯಲ್ಲಿ ಅತ್ಯುತ್ತಮ ವಿಧಾನಪರಿಷತ್ತು/ ವಿಧಾನಸಭೆ ಪ್ರಶಸ್ತಿಗೆ ಮಾನದಂಡಗಳನ್ನು ಸೂಚಿಸಲು ಸಮಿತಿ ರಚಿಸಲಾಗಿದೆ.

Advertisement

ಪೀಠಾಸೀನಾಧಿಕಾರಿಗಳ ಸಮಿತಿಯ ಸಭೆಯು ಸಂಸತ್ ಭವನದಲ್ಲಿ ಸಭೆ ಸೇರಿ, ಈ ನಿಮಿತ್ತ ತಯಾರಿಸಲಾದ ಪ್ರಶ್ನಾವಳಿಗಳ ಕುರಿತು ಸುದೀರ್ಘವಾಗಿ ಚರ್ಚಿಸಿತು. ಈ ಸಭೆಯಲ್ಲಿ ಸದಸ್ಯರುಗಳಾದ ನವದೆಹಲಿ, ಗುಜರಾತ್, ಅಸ್ಸಾಂ, ಬಿಹಾರ್ ಮತ್ತು ತಮಿಳುನಾಡು ವಿಧಾನಸಭಾ ಅಧ್ಯಕ್ಷರುಗಳು ಪಾಲ್ಗೊಂಡಿದ್ದರು.

ಇದನ್ನೂ ಓದಿ:ಡ್ರಗ್ ಕೇಸ್: ಜಾಮೀನಿನ ಮೇಲೆ ಬಿಡುಗಡೆಯಾದ ಶ್ರದ್ಧಾ ಕಪೂರ್ ಸಹೋದರ ಸಿದ್ದಾಂತ್ ಕಪೂರ್

ಸಮಿತಿ ಅಧ್ಯಕ್ಷರಾದ ಕಾಗೇರಿಯವರು ಮಾನದಂಡಗಳನ್ನು ನಿಗದಿಪಡಿಸುವ ಸಂಬಂಧದಲ್ಲಿ ಸೂಕ್ತ ಪ್ರಶ್ನಾವಳಿಗಳನ್ನು ತಯಾರಿಸಲು ಸಭೆಯಲ್ಲಿ ಹಾಜರಿದ್ದ ಲೋಕಸಭೆಯ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಮುಂದಿನ ಸಮಿತಿಯ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next